ದೇವಸ್ಥಾನಗಳನ್ನು ಅಗೆದರೆ ಬೌದ್ಧ ಸ್ಥೂಪಗಳೂ ಸಿಗುತ್ತವೆ: ಎಚ್.ಸಿ ಮಹದೇವಪ್ಪ

Update: 2022-05-28 14:39 GMT

ಬೆಂಗಳೂರು: 'ಇತಿಹಾಸ ಎಂಬುದು ಬಹಳಷ್ಟು ಆಳವಾದ ವಿಷಯವಾಗಿದೆ ಅಲ್ಲಿ ಮಸೀದಿಯನ್ನು ಅಗೆದರೆ ದೇವಸ್ಥಾನಗಳು ಸಿಗುತ್ತವೆ ದೇವಸ್ಥಾನಗಳನ್ನು ಅಗೆದರೆ ಬೌದ್ಧ ಸ್ಥೂಪಗಳೂ ಸಿಗುತ್ತವೆ' ಎಂದು ಮಾಜಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಹೇಳಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಸಿಂಧೂ ನಾಗರೀಕತೆಯನ್ನು ಸರಿಯಾಗಿ ಓದಿದವರಿಗೆ ಆರ್ಯರು ಯಾರು? ಅವರ ಎಲ್ಲಿಂದ ಬಂದರು? ಎಂಬ ಸಂಗತಿಯು ಬಹಳ ಸುಲಭವಾಗಿ ಅರ್ಥವಾಗುತ್ತದೆ. ಅಭಿವೃದ್ಧಿಯ ವಿಷಯವನ್ನು ಮೂಲೆಗೆ ತಳ್ಳಿ, ಜನ ಸಾಮಾನ್ಯರ ಬದುಕಿಗೆ ಬೆಂಕಿಯಿಟ್ಟು ಈಗ ಧರ್ಮದ ಹೆಸರಲ್ಲಿ ಗಲಭೆ ಎಬ್ಬಿಸುತ್ತಿರುವ ಮತೀಯ ವಾದಿಗಳು ಇತಿಹಾಸ ಮತ್ತು ಮಾನವ ಶಾಸ್ತ್ರವನ್ನು ಸರಿಯಾಗಿ ಓದಲಿ'   ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News