ಚಡ್ಡಿಯಿಂದ ಪ್ಯಾಂಟಿಗೆ ಬದಲಾದರೂ ಮನಸ್ಥಿತಿ ಬದಲಾಗಿಲ್ಲ: ರಮೇಶ್ ಬಾಬು

Update: 2022-06-06 15:29 GMT

ಬೆಂಗಳೂರು, ಜೂ.6: 'ಚಡ್ಡಿಯಿಂದ ಪ್ಯಾಂಟಿಗೆ ಬದಲಾದರೂ ಮನಸ್ಥಿತಿ ಬದಲಾಗಿಲ್ಲ' ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಹೇಲಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'ಪ್ರತಿಭಟನೆಗೆ ನಾನಾ ಆಯಾಮಗಳು ಸಾಂಕೇತಿಕವಾಗಿ ಸಚಿವ ನಾಗೇಶ್ ಮನೆ ಮುಂದೆ ಪ್ರತಿಭಟನೆ ಮಾಡಿದ ಎನ್‍ಎಸ್‍ಯುಐ ಚಡ್ಡಿ ಸುಟ್ಟ ನೆಪದಲ್ಲಿ ಸುಳ್ಳು ಕೇಸು ದಾಖಲಿಸಿ ಗಣವೇಶದ ಅಪಹಾಸ್ಯಗಳನ್ನು ಬೀದಿ ಚರ್ಚೆಗೆ ತಂದ ಆರೆಸ್ಸೆಸ್ ಸಂವೇದನೆ ಕಳೆದುಕೊಂಡಿದೆ' ಎಂದು ಹೇಳಿದ್ದಾರೆ. 

‘ಕಾನ್ಪುರದಲ್ಲಿ ಕೋಮು ಸಂಘರ್ಷ ಹೆಚ್ಚಿದ್ದು ಬಿಜೆಪಿ ಬುಲ್ಡೋಜರ್ ಸಂಸ್ಕೃತಿಯನ್ನು ಪರಿಚಯಿಸಿದ್ದು, ನಿಮಗೆ ತಾಕತ್ತಿದ್ದರೆ ಈ ಕೋಮು ಗಲಭೆಗೆ ಕಾರಣವಾಗಿರುವವರ ಮನೆ ಮೇಲೆ ಬುಲ್ಡೋಜರ್ ಕ್ರಮ ಜರುಗಿಸಿ. ಕೇವಲ ಉಚ್ಚಾಟಿಸಿದರೆ ಸಾಲದು ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಿ. ಅರುಣ ಸಿಂಗ್ ತಾವು ಈ ದೇಶದ ಸಂವಿಧಾನ ಒಪ್ಪಿಕೊಳ್ಳುತ್ತೇವೆ. ಕೋಮು ಸಾಮಸ್ಯಕ್ಕೆ ಸಹಕಾರ ನೀಡುತ್ತೇವೆ. ಯಾವುದೇ ಜಾತಿ-ಧರ್ಮದ ವಿಚಾರದಲ್ಲಿ ಬಿಜೆಪಿ ಪೂರ್ವಾಗ್ರಹ ಪೀಡಿತವಾಗಿಲ್ಲ ಎಂದು ಹೇಳಿದ್ದಾರೆ. ಆದರೆ, ಈಶ್ವರಪ್ಪ, ಸಿ.ಟಿ.ರವಿ, ಪ್ರತಾಪ್ ಸಿಂಹ, ರೇಣುಕಾಚಾರ್ಯ ಸೇರಿ ಅನೇಕರಿಗೆ ಅನುಮತಿ ನೀಡಿದ್ದೀರಿ. ನಿಮ್ಮ ಹೇಳಿಕೆಗೆ ಬದ್ಧವಾಗಿದ್ದರೆ ಬಾಯಿ ಹರುಕ ನಾಯಕರ ಬಾಯಿಗೆ ಬೀಗ ಹಾಕಿ. ಇಲ್ಲದಿದ್ದರೆ ಅವರನ್ನೂ ಪಕ್ಷದಿಂದ ಹೊರಹಾಕಿ'

-ರಮೇಶ್ ಬಾಬು ಕಾಂಗ್ರೆಸ್ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News