ಹಾಸನ; ಪ್ರಚೋದನಕಾರಿ ಭಾಷಣ: ಮುತಾಲಿಕ್ ವಿರುದ್ಧ ಪೋಲಿಸರಿಗೆ ದೂರು

Update: 2022-06-09 18:28 GMT

ಹಾಸನ:  ಜೂ.9: ಜಿಲ್ಲಾ ಕಾಂಗ್ರೇಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ವತಿಯಿಂದ  ಶ್ರೀ ರಾಮಸೇನ ಅಧ್ಯಕ್ಷ ಪ್ರಮೋದ್  ಮುತಲಿಕ್  ಪ್ರಚೋದನಕಾರಿ ಹೇಳಿಕೆ ವಿರುದ್ದ ಡಿ ವೈ ಎಸ್ ಪಿ ಉದಯ್ ಬಾಸ್ಕರ್ ರವರಿಗೆ ದೂರುಸಲ್ಲಿಸಲಾಯಿತು. 

 ಶ್ರೀ ರಾಮಸೇನ ಅಧ್ಯಕ್ಷ ಪ್ರಮೋದ್  ಮುತಲಿಕ್  ಪ್ರಚೋದನಕಾರಿ ಹೇಳಿಕೆನೀಡುತ್ತಾ ಸಮಾಜದ ಶಾಂತಿ ಕದಡಲು ನಿರಂತರವಾಗಿ ಪ್ರಯತ್ನ ಪಡುತ್ತಿದ್ದಾರೆ. ಸಾಂವಿಧಾನದ ವಿರುದ್ದವಾಗಿ ನಡೆದುಕೊಳ್ಳುತ್ತಾ, ಸಮಾಜಕ್ಕೆ ಕಂಟಕ ವಾಗಿರುವ ಈ ವ್ಯಕ್ತಿಯ ಮೇಲೆ ಉಗ್ರವಾದ ಕಾನೂನು ಕ್ರಮ ಕೈಗೊಳ್ಳಲು ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು. 

ಈ ಸಂರ್ಧಭದಲ್ಲಿ ಜಿಲ್ಲಾ ಕಾಂಗ್ರೇಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ  ಅಬ್ದುಲ್ ಸಮದ್. ಕಾರ್ಯದರ್ಶಿ ಖಾಲೀದ್ ಮನ್ಸರ್
ಹಾಸನ ನಗರ ಕಾಂಗ್ರೇಸ್ ಬ್ಲಾಕ್‌‌ ಅದ್ಯಕ್ಷ ಮಹಮ್ಮದ್ ಅರೀಪ್, ಜಿಲ್ಲಾ ಸಂಯೋಜಕರಾದ ಹೆನ್ರಿ ಡಿಸೋಜ. ಜಮೀರ್ ಪಾಶ. ನಯಾಜ್ ಪಾಶ.ಜವೂರ್  .ಪ್ರನ್ನಾಸಿಸ್. ಜೀಶಾನ್.  ನಗರಸಭೆ ಮಾಜಿ ಸದಸ್ಯ, ಅಬ್ದುಲ್ ಖಯಮ್ ಹಾಗೂ ಇತರರು ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News