ಕಾಸರಗೋಡು: ಸಿಎಂ ಪಿಣರಾಯಿ ವಿಜಯನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ

Update: 2022-06-11 11:18 GMT

ಕಾಸರಗೋಡು: ಚಿನ್ನ ಕಳ್ಳಸಾಗಾಟ ಆರೋಪಕ್ಕೆ ಸಿಲುಕಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದು,  ಪಿಣರಾಯಿ ವಿಜಯನ್ ರವರ  ಲುಕ್ ಔಟ್ ನೋಟೀಸನ್ನು ಲಗತ್ತಿಸಿದರು.

ಕಾಸರಗೋಡು ಸರಕಾರಿ ಕಾಲೇಜು ಪರಿಸರದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರನ್ನು ಎಸ್ಪಿ ಕಚೇರಿಯ ನೂರು ಮೀಟರ್ ಅಂತರದಲ್ಲಿ ಪೊಲೀಸರು ತಡೆದರು.

ಪ್ರತಿಭಟನಾಕಾರರು ಪೊಲೀಸರ ಬ್ಯಾರಿಕೇಡ್ ಗಳಿಗೆ ಲುಕ್ ಔಟ್ ನೋಟಿಸ್ ಗಳನ್ನು ಲಗತ್ತಿಸಿದರು. ಮುಖಂಡರಾದ ಅಶ್ರಫ್ ಎಡನೀರು, ಆಸಿಫ್, ಅಝೀಝ್ ಕಳತ್ತೂರು ಮೊದಲಾದವರು ನೇತೃತ್ವ ನೀಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News