ಮಂಡ್ಯ: ಪ್ರಾಂಶುಪಾಲರ ವಿರುದ್ಧ ಶಾಸಕ ಶ್ರೀನಿವಾಸ್ ಆಕ್ರೋಶ

Update: 2022-06-20 18:35 GMT

ಮಂಡ್ಯ, ಜೂ.20: ಉನ್ನತೀಕರಿಸಲಾಗಿರುವ ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ) ಲೋಕಾರ್ಪಣೆ ಕಾರ್ಯಕ್ರಮ ಸಂದರ್ಭ ಶಾಸಕ ಎಂ.ಶ್ರೀನಿವಾಸ್ ಅವರು ಸಂಸ್ಥೆ ಪ್ರಾಂಶುಪಾಲರ ಮೇಲೆ ಗರಂ ಆಗಿ ಹಲ್ಲೆ ಮಾಡಲು ಯತ್ನಿಸಿದ್ದಾರೆನ್ನಾದ ಘಟನೆ ನಡೆದಿದೆ.

ಆರಂಭದಲ್ಲಿ ಶಾಸಕ ಎಂ.ಶ್ರೀನಿವಾಸ್ ಉನ್ನತೀಕರಿಸಿದ ಐಟಿಐ ಸಂಸ್ಥೆಯನ್ನು ಟೇಪು ಕಟ್ ಮಾಡಿ ಉದ್ಘಾಟಿಸಿ ಒಳಪ್ರವೇಶಿದರು. ನಂತರ, ನಗರಸಭಾಧ್ಯಕ್ಷ ಎಚ್.ಎಸ್.ಮಂಜು ಅವರು ಪ್ರಯೋಗಾಲಯವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶಾಸಕರು ಪ್ರಯೋಗಾಲಯದ ಬಗ್ಗೆ ಮಾಹಿತಿ ಕೇಳಲು ಬಯಸಿದರು.  ಪ್ರಾಂಶುಪಾಲ ನಾಗಾನಂದ ಅವರು ಸಕಾಲದಲ್ಲಿ ಬರಲಿಲ್ಲವಾದ್ದರಿಂದ ಕೋಪಗೊಂಡ ಶಾಸಕ ಶ್ರೀನಿವಾಸ್ ಅವರು, ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಅವರ ಮೇಲೆ ಹಲ್ಲೆ ಮಾಡಲು ಮುಂದಾದರು ಎಂದು ಆರೋಪಿಸಲಾಗಿದೆ.

ನಂತರ ಪ್ರಾಂಶುಪಾಲರನ್ನು ಸಮಾಧಾನಿಸಿ ನವೀಕೃತ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಘಟನೆಯಿಂದ ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ಐಶ್ವರ್ಯ, ನಗರಸಭಾಧ್ಯಕ್ಷ ಎಚ್.ಎಸ್.ಮಂಜು, ಮೈಷುಗರ್ ಅಧ್ಯಕ್ಷ ಶಿವಲಿಂಗೇಗೌಡ ಮತ್ತಿತರ ಅತಿಥಿ ಗಣ್ಯರು ಹಾಗೂ ವಿದ್ಯಾರ್ಥಿಗಳು ಸ್ವಲ್ಪ ಸಮಯ ಆತಂಕಕ್ಕೊಳಗಾದರು.  ಪ್ರಾಂಶುಪಾಲರಿಂದ ಮನೆಮಾಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News