ಮಂಡ್ಯ: ಯುವಕನ ಹತ್ಯೆ

Update: 2022-07-04 09:23 GMT
ಸುನೀಲ್ ಕುಮಾರ್- ಕೊಲೆಗೀಡಾದ ಯುವಕ

ನಾಗಮಂಗಲ, ಜು.4: ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ  ವಿ ಎಸ್ ಎಸ್ ಎನ್ ಸೊಸೈಟಿ ನಿರ್ದೇಶಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ

ಬೆಳ್ಳೂರು ಪಟ್ಟಣ ವಾಸಿ ಹಾಗೂ  ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ  36 ವರ್ಷದ  ಸುನೀಲ್ ಕುಮಾರ್ ಕೊಲೆಯಾದ ವ್ಯಕ್ತಿಯಾಗಿದ್ದು, ಬೆಳ್ಳೂರು ಪಟ್ಟಣದ   ಆರಣಿ ರಸ್ತೆಯ  ಸಂತೆಮೈದಾನದ ಹರಳಿಮರ ಸರ್ಕಲ್ ಬಳಿ ರವಿವಾರ ತಡರಾತ್ರಿ 10:30ರ ಸುಮಾರಿನಲ್ಲಿ  ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ.

ಮಾರಕಾಸ್ತ್ರಗಳಿಂದ  ಕುತ್ತಿಗೆ  ಸೀಳಿ ಬರ್ಬರವಾಗಿ  ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಈತನ ಕೊಲೆಗೆ ನಿಖರ ಕಾರಣ ತಿಳಿದಿಲ್ಲ. ವೈಯಕ್ತಿಕ ದ್ವೇಷ  ಕಾರಣವಿರಬಹುದು ಎಂಬ  ಶಂಕೆಗಳು  ವ್ಯಕ್ತವಾಗಿದೆ. ಶಾಸಕ ಸುರೇಶ್ ಗೌಡ,  ಹತ್ಯೆ  ಆರೋಪಿಗಳ ಬಂಧನಕ್ಕೆ  ತ್ವರಿತ ಕ್ರಮವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಘಟನಾ  ಸ್ಥಳಕ್ಕೆ ಮಂಡ್ಯ ಎಸ್ಪಿ ಯತೀಶ್, ನಾಗಮಂಗಲ ಡಿವೈಎಸ್ಪಿ ನವೀನ್ ಕುಮಾರ್, ಸಿಪಿಐ ಸುಧಾಕರ್, ಬೆಳ್ಳೂರು ಠಾಣೆಯ ಪಿಎಸ್ ಐ ಲೋಕೇಶ್  ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬೆಳ್ಳೂರು ಠಾಣೆಯಲ್ಲಿ ‌ಪ್ರಕರಣ  ದಾಖಲಿಸಿಕೊಂಡ ಆರೋಪಿಗಳ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News