ಕನ್ನಡಚಂದ್ರ ಪ್ರಶಸ್ತಿ ಪ್ರಕಟ: ಜು.21ರಂದು ಪ್ರಶಸ್ತಿ ಪ್ರದಾನ

Update: 2022-07-06 18:45 GMT

ಬೆಂಗಳೂರು, ಜು.6: ಕನ್ನಡಚಂದ್ರ ಪ್ರಶಸ್ತಿ ಪ್ರದಾನ ಸಮಿತಿ ವತಿಯಿಂದ ನೀಡುವ “ಕನ್ನಡಚಂದ್ರ ಪ್ರಶಸ್ತಿ”ಗೆ ಕನ್ನಡ ಕಾರ್ಯಕರ್ತ ರಾ.ಪ್ರಭುಶಂಕರ ಹಾಗೂ ಭಾರ್ಗವಿ ಹೇಮಂತ್ ಆಯ್ಕೆ ಆಗಿದ್ದಾರೆ. ಪ್ರಶಸ್ತಿಯು 5 ಸಾವಿರ ನಗದು ಹಣವನ್ನು ಹಾಗೂ  ಸ್ಮರಣಿಕೆಯನ್ನು ಒಳಗೊಂಡಿದೆ. ಜು.21ರಂದು ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ. 

ಹೋರಾಟಗಾರ ರಾ.ನಂ. ಚಂದ್ರಶೇಖರ್ ಅವರಿಗೆ 60 ವರ್ಷ ತಂಬಿದ ಸಂದರ್ಭದಲ್ಲಿ 1.5 ಲಕ್ಷ ನಗದನ್ನು ಇಡಿಗಂಟಾಗಿಟ್ಟು, ಅದರಿಂದ ಬರುವ ಬಡ್ಡಿಯನ್ನು “ಕನ್ನಡಚಂದ್ರ ಪ್ರಶಸ್ತಿ” ಹೆಸರಿನಲ್ಲಿ ನೀಡಲಾಗುತ್ತಿದೆ. 2020ನೇ ಸಾಲಿನ ಪ್ರಶಸ್ತಿಯನ್ನು ರಾ. ಪ್ರಭುಶಂಕರ ಅವರಿಗೆ ಹಾಗೂ 2021ನೇ ಸಾಲಿನ ಪ್ರಶಸ್ತಿಯನ್ನು ಭಾರ್ಗವಿ ಅವರಿಗೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News