ಕೃಷಿ ಸಚಿವ ಬಿ.ಸಿ.ಪಾಟೀಲ್ ಹುಡುಕಿಕೊಡಿ: ಕಾಂಗ್ರೆಸ್ ಟೀಕೆ

Update: 2022-08-08 14:11 GMT

ಬೆಂಗಳೂರು, ಆ.8: ರಾಜ್ಯದ ಜನರಲ್ಲಿ ಮನವಿ, ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಹುಡುಕಿಕೊಡಬೇಕಾಗಿ ವಿನಂತಿ. ಗೊಬ್ಬರ ಕೊರತೆ, ಅತಿವೃಷ್ಟಿ ಹಾನಿ ಸೇರಿ ರೈತರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಉಂಟಾದಾಗಲೂ ಅವರು ಕಾಣಸಿಗುತ್ತಿಲ್ಲ, ನೆರೆ ಹಾನಿಯ ಬಗ್ಗೆ ಸರ್ವೆ ನಡೆಸಿ ಪರಿಹಾರ ಒದಗಿಸುವ ಕೆಲಸ ಮಾಡಬೇಕಾದವರು ನಾಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯದಲ್ಲಿ ಅತಿವೃಷ್ಟಿಗೆ ಇದುವರೆಗೂ 73 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಕಂದಾಯ ಸಚಿವರು ಹೇಳಿದ್ದಾರೆ. 73 ಜನರಲ್ಲಿ ಎಷ್ಟು ಕುಟುಂಬಕ್ಕೆ ಪರಿಹಾರ ನೀಡಲಾಗಿದೆ ಎಂಬುದನ್ನ ಏಕೆ ಹೇಳಲಿಲ್ಲ? ಆ ಕುಟುಂಬಗಳಿಗೆ ಇದುವರೆಗೂ ಪರಿಹಾರ ಏಕೆ ಘೋಷಿಸಲಿಲ್ಲ? ಸರಕಾರದ ಪರಿಹಾರ ಪಡೆಯುವ ಮಾನದಂಡ-ಬಿಜೆಪಿ ಕಾರ್ಯಕರ್ತರಾಗಿ ಕೊಲೆಯಾಗುವುದು ಮಾತ್ರವೇ? ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News