ಬಂಕಲ್ಲು: ಶ್ರಾವಣ ಸಂಭ್ರಮ ಕಾರ್ಯಕ್ರಮ

Update: 2022-08-09 18:35 GMT

ಶಿರ್ವ: ಬಂಟಕಲ್ಲು ಶ್ರೀದುರ್ಗಾಪರಮೆಶ್ವರೀ ದೇವಳದಲ್ಲಿ ಇತ್ತೀಚೆಗೆ ಜರಗಿದ ಶ್ರೀದುರ್ಗಾ ಮಹಿಳಾ ಚಂಡೆಬಳಗದ ಶ್ರಾವಣ ಸಂ್ರಮ ಕಾರ್ಯಕ್ರಮವನ್ನು ಇನ್ನಂಜೆ (ಶಂಕರಪುರ) ಬ್ಯಾಂಕ್ ಆಪ್ ಬರೋಡಾ ಶಾಖಾ ಪ್ರಬಂಧಕಿ ಶಿಲ್ಪಾ ವಿ.ನಾಯಕ್ ಉದ್ಘಾಟಿಸಿದರು.

ಹಿರಿಯ ಚಿಂತಕಿ ಸುಮತಿ ಪ್ರಭು ಕುಕ್ಕಿಕಟ್ಟೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕಾರ್ಕಳ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್. ಪಾಟ್ಕರ್, ಬಂಟಕಲ್ಲು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು ಶುಭಶಂಸನೆಗೈದರು.

ಈ ಸಂದರ್ಭದಲ್ಲಿ ತುಳುನಾಡಿನ ಕಂಬಳಕೋಣಗಳನ್ನು ಓಡಿಸುವ ಸಾಧಕ ಶಿರ್ವ ಕೋಡಿ ಮದ್ದಣಕೆರೆ ವಿಶ್ವನಾಥ್ ಪ್ರಭು, ರಾಷ್ಟ್ರಮಟ್ಟದ ಪ್ರಬಂಧ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶ್ರೇಯಾ ನಾಯಕ್‌ರನ್ನು ಸನ್ಮಾನಿಸಲಾಯಿತು. ಕಲಾವಿದ ಹರೀಶ್ ಅಜೇರು, ಬಹುಬಾಷಾ ಕವಯತ್ರಿ ಹಾಡು ಗಾರ್ತಿ ಕುಸುಮಾ ಕಾಮತ್ ಕರ್ವಾಲು ಇವರಿಂದ ಕನ್ನಡ, ಕೊಂಕಣಿ ಗೀತಾ ಗಾಯನ ಜರುಗಿತು.

ಅಧ್ಯಕ್ಷತೆಯನ್ನು ಮಹಿಳಾ ಚಂಡೆ ಬಳಗದ ಅಧ್ಯಕ್ಷೆ ಗೀತಾ ವಾಗ್ಲೆ ವಹಿಸಿದ್ದರು. ನೀಲವೇಣಿ ಪ್ರಭು ವರದಿ ಓದಿದರು. ಭವಾನಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಆಶಾ ನಾಯಕ್ ವಂದಿಸಿದರು. ನಂತರ ಶ್ರಾವಣ ಮಾಸದ ತಿಂಡಿ ತಿನಿಸುಗಳನ್ನೊಳಗೊಂಡ ವಿಶೇಷ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News