ಕುಷ್ಟಗಿ: ತ್ರಿವರ್ಣ ಧ್ವಜ ಹೊದಿಸಲಾಗಿರುವ ಕಂಬದ ಮೇಲೆ ಭಗವಧ್ವಜ ಹಾರಾಟ

Update: 2022-08-10 11:24 GMT

ಕುಷ್ಟಗಿ, ಆ. 10: ಇಲ್ಲಿನ ವೃತ್ತವೊಂದರಲ್ಲಿ ತ್ರಿವರ್ಣ ಧ್ವಜ ಹೊದಿಸಲಾಗಿರುವ ಕಂಬದ ಮೇಲೆ ಭಗವಧ್ವಜ ಹಾರಿಸಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆಕ್ರೋಶ ವ್ಯಕ್ತವಾಗಿದೆ. 

ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ ಅಂಗವಾಗಿ ವಕ್ಕಂದುರ್ಗಾದಿಂದ ಕುಷ್ಟಗಿ ವರೆಗೆ ಬಿಜೆಪಿ ಬೈಕ್ ರ‍್ಯಾಲಿ ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ  ಪ್ರಮುಖ ವೃತ್ತಗಳನ್ನು  ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜವನ್ನು ಅಲಂಕರಿಸಲಾಗಿದೆ. ಮಾರುತಿ ವೃತ್ತದ ಕಂಬದ ಮೇಲೆ ಕೂಡ ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜ ಹೊದಿಸಲಾಗಿದ್ದು, ಅದರ ಮೇಲೆ ಭಗವಧ್ವಜ ಹಾರಿಸಲಾಗಿದೆ. 

ತ್ರಿವರ್ಣ ಧ್ವಜವನ್ನು ಹೊದಿಸಲಾಗಿರುವ  ಕಂಬಕ್ಕೆ ಭಗವಧ್ವಜ ಕಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಥಳೀಯ ಕಾಂಗ್ರೆಸ್ ನಾಯಕರು ಬಿಜೆಪಿಗರನ್ನು ಪ್ರಶ್ನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News