ಮಡಿಕೇರಿ: ಮಂಚಳ್ಳಿ ಹೊಳೆಯಲ್ಲಿ ತೇಲಿ ಬಂದ ಮರಿಯಾನೆಯ ರಕ್ಷಣೆ

Update: 2022-08-10 17:43 GMT

ಮಡಿಕೇರಿ ಆ.10 : ಕುಟ್ಟ ಸಮೀಪ ಮಂಚಳ್ಳಿ ಎಂಬಲ್ಲಿ ತುಂಬಿ ಹರಿಯುತ್ತಿರುವ ಹೊಳೆಯಲ್ಲಿ ತೇಲಿ ಬಂದ ಕಾಡಾನೆ ಮರಿಯನ್ನು ರಕ್ಷಿಸಲಾಗಿದೆ.

ಸ್ಥಳೀಯ ನಿವಾಸಿ ರಾಜ ತಿಮ್ಮಯ್ಯ ಅವರ ತೋಟದ ಬಳಿ ಹೊಳೆಯಲ್ಲಿ ತೇಲಿ ಬಂದ ಆನೆಮರಿಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ನೀಡಲಾಗಿದೆ.

ಪ್ರಥಮ ಚಿಕಿತ್ಸೆ ನೀಡಿದ ನಂತರ ಮರಿಯಾನೆಯನ್ನು ತಿತಿಮತಿ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಬಿಡಲಾಗಿದೆ. ಮೂರು ತಿಂಗಳ ಗಂಡು ಮರಿಯಾನೆ ಸುರಕ್ಷಿತವಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News