ಎಂಜೆಎಂ ಮಸೀದಿ ಕುಂಡದಬೆಟ್ಟು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ, ಸಾಧಕರಿಗೆ ಸನ್ಮಾನ

Update: 2022-08-15 10:44 GMT

ಕುಂಡದಬೆಟ್ಟು: ಎಂ.ಜೆ.ಎಂ ಮಸ್ಜಿದ್ ಕುಂಡದ ಬೆಟ್ಟು ಹಾಗೂ ಎಸ್.ಬಿ.ಎಸ್ ದಾರುಸ್ಸಲಾಂ ಮದ್ರಸ ಕುಂಡದಬೆಟ್ಟು ಇದರ ವತಿಯಿಂದ ಫ್ರೀಡಂ ಸಂಗಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ  ಕುಂಡದಬೆಟ್ಟುವಿನಲ್ಲಿ ನಡೆಯಿತು.

ಎಸ್.ಎನ್.ಎಂ ಪಾಲಿಟೆಕ್ನಿಕ್ ಮೂಡಬಿದಿರೆಯ ಶಿಕ್ಷಕರಾದ ರಾಜೇಂದ್ರ ಕುಂಡದಬೆಟ್ಟು ಫ್ರೀಡಂ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು. ಕುಕ್ಕೇಡಿ ನಿಟ್ಟಡೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ದನ ಪೂಜಾರಿ ಅವರು ಧ್ವಜಾರೋಹಣಗೈದರು. 

MJM ಕುಂಡದಬೆಟ್ಟು ಖತೀಬರಾದ ಕೆ.ಎಂ.ಹನೀಫ್ ಸಖಾಫಿ ಸ್ವಾತಂತ್ರ್ಯ ಸಂದೇಶ ನೀಡಿದರು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಡಾ.ಶಾಂತಿಪ್ರಸಾದ್, ನಿವೃತ್ತ ಎಎಸ್ಐ KH ಯೂಸುಫ್ ಕುಂಡದಬೆಟ್ಟು, ನಿವೃತ್ತ ಶಿಕ್ಷಕರಾದ ಉದಯಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ  DSM ಕುಂಡದಬೆಟ್ಟು ಅಧ್ಯಾಪಕರುಗಳಾದ ಹಾರಿಸ್ ಸಖಾಫಿ, ಅಬ್ದುಲ್ ಹಮೀದ್ ಮುಸ್ಲಿಯಾರ್, SMA ವೇಣೂರು ರೀಜನಲ್ ಅಧ್ಯಕ್ಷ ಇಸ್ಲಾಯಿಲ್ KY,  ಅಶ್ರಫ್ ಅಸರ್, ಹನೀಫ್ G, ಹೈದರ್ ಅಮೈ, ಅಬೂಬಕ್ಕರ್ ಹಂದೇವು ಮತ್ತಿತರರು ಉಪಸ್ಥಿತರಿದ್ದರು. SBS ದಾರುಸ್ಸಲಾಂ ಮದ್ರಸ ಕುಂಡದಬೆಟ್ಟು ಜೊತೆ ಕಾರ್ಯದರ್ಶಿ ಸವಾದ್ ಪಾಣೂರು ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News