ನನ್ನ ತಂದೆ ನೀರು ಮುಟ್ಟಿದ್ದಕ್ಕಾಗಿ ಥಳಿಸಲ್ಪಟ್ಟಿದ್ದರು, ದಲಿತರ ಪರಿಸ್ಥಿತಿ ಇಂದಿಗೂ ಹಾಗೇ ಇದೆ: ಮೀರಾ ಕುಮಾರ್

Update: 2022-08-16 18:23 GMT

ಹೊಸದಿಲ್ಲಿ: ರಾಜಸ್ಥಾನದಲ್ಲಿ ಇಂದು ನಡೆದ 9 ವರ್ಷದ ದಲಿತ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಮಾಜಿ ಸಚಿವೆ, ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್(Meira Kumar) ಅವರು ಪ್ರತಿಕ್ರಿಯಿಸಿದ್ದಾರೆ. "ಬಾಲಕ ಮಡಕೆಯಿಂದ ನೀರನ್ನು ಕುಡಿದ ಕಾರಣ, ಆತನ ಶಿಕ್ಷಕನೊಬ್ಬ ಬಾಲಕನನ್ನು ತೀವ್ರವಾಗಿ ಥಳಿಸಿದ್ದಾರೆ. ತನ್ನ ತಂದೆ ದಲಿತ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್(Babu Jagajeevan Ram) ಅವರನ್ನು ಶತಮಾನದ ಹಿಂದೆ ಇದೇ ಅಪರಾಧಕ್ಕಾಗಿ ಥಳಿಸಲಾಗಿತ್ತು ಎಂದು ಮೀರಾ ಕುಮಾರ್ ಹೇಳಿದ್ದಾರೆ. “ಸ್ವಾತಂತ್ರ್ಯ ಪಡೆದು 75 ವರ್ಷಗಳಾದರೂ ಭಾರತ ಬದಲಾಗಿಲ್ಲ. ಯಾವುದೇ ಬದಲಾವಣೆ ಇಲ್ಲ” ಎಂದು ಅವರು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೀರಾ ಕುಮಾರ್ ಬಹಿರಂಗಪಡಿಸಿದ್ದಾರೆ.

 “ನೀವು ಸ್ವಾತಂತ್ರ್ಯಕ್ಕಾಗಿ ಏಕೆ ಹೋರಾಡಿದ್ದೀರಿ? ಈ ರಾಷ್ಟ್ರ ನಿನಗಾಗಿ ಏನನ್ನೂ ಮಾಡಿಲ್ಲ. ಅದರಿಂದ ನಿಮಗೆ ಅಥವಾ ನಿಮ್ಮ ಪೂರ್ವಜರಿಗೆ ಏನನ್ನೂ ಒದಗಿಸಲಾಗಿಲ್ಲ “ ಎಂದು ನಾನು ನನ್ನ ತಂದೆಯನ್ನು ಪ್ರಶ್ನಿಸಿದೆ. "ಜಾತಿ ಮುಕ್ತ ಭಾರತ ರೂಪಾಂತರಗೊಳ್ಳಲಿದೆ. ಜಾತಿ ಮುಕ್ತ ಸಮಾಜದಲ್ಲಿ ಬದುಕುತ್ತೇವೆ" ಎಂದು ಅವರು ನಂಬಿದ್ದರು. ಅವರು ಈಗ ಇಲ್ಲಿ ಇರದಿರುವುದು ನನಗೆ ಖುಷಿ ತಂದಿದೆ ಎಂದು ಮೀರಾ ಕುಮಾರ್ ಹೇಳಿದ್ದಾರೆ.

77ರ ಹರೆಯವಾಗಿದೆ, ತನ್ನ ಪರಿಸ್ಥಿತಿಯೂ ಏನೂ ಬದಲಾಗಿಲ್ಲ ಎಂದು ಹೇಳಿದ ಮೀರಾ ಕುಮಾರ್, "ನನಗೆ ಅಸಹ್ಯಕರ ಮಾತುಗಳು, ನೇರವಾದ ತಾರತಮ್ಯಗಳನ್ನು ಮಾಡಲಾಗಿದೆ" ಎಂದು ಹೇಳಿಕೊಂಡಿದ್ದಾರೆ.

ಜಾತಿ ವ್ಯವಸ್ಥೆಯು ಭಾರತದ ಗಡಿಯನ್ನು ಮೀರಿ ಹೇಗೆ ಹರಡಿದೆ ಎಂಬುದನ್ನು ವಿವರಿಸಲು ತಮ್ಮ ವೈಯಕ್ತಿಕ ಅನುಭವವನ್ನು ಉಲ್ಲೇಖಿಸಿದ್ದಾರೆ. ಲಂಡನ್‌ನಲ್ಲಿ ಬಾಡಿಗೆ ಮನೆಗಾಗಿ ಹುಡುಕುತ್ತಿರುವಾಗ, ಅದರ ಮಾಲೀಕರು ತನ್ನ ಜಾತಿಯ ಬಗ್ಗೆ ಕೇಳಿದರು ಎಂದು ಅವರು ಹೇಳಿದ್ದಾರೆ.

ನನಗೆ ಮನೆ ಇಷ್ಟವಾದ ಕಾರಣ ನಾನು ಸ್ಥಳಾಂತರಗೊಳ್ಳುತ್ತೇನೆ ಎಂದು ನಾನು ಅವರಿಗೆ ಹೇಳಿದೆ. ಹೊರಡುವ ಮುನ್ನ ಅವರು ನೀವು ಬ್ರಾಹ್ಮಣರಲ್ವಾ ಎಂದು ಕೊನೆಯ ಪ್ರಶ್ನೆಯನ್ನು ಕೇಳಿದರು."ಇಲ್ಲ, ನಾವು ಬ್ರಾಹ್ಮರಲ್ಲ, ಪರಿಶಿಷ್ಟ ಜಾತಿ, ನಿಮಗೆ ಸಮಸ್ಯೆ ಇದೆಯೇ?  " ಎಂದು ನಾನು ಕೇಳಿದೆ. ಅವರು "ಇಲ್ಲ" ಎಂದು ಹೇಳಿದರು. ಆದರೆ, ಅವರು ನನಗೆ ಮನೆ ಕೊಟ್ಟಿಲ್ಲ ಎಂದು ಮೀರಾ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ದಲಿತರು ಮೂರ್ಖರು ಎಂಬ ಭಾವನೆ ರೂಢಿಯಲ್ಲಿದೆ. ಆದರೆ, ದಲಿತರು ಮನುಷ್ಯರು ಮತ್ತು ಬುದ್ಧಿವಂತರು. ನಾವು ಯಾವಾಗ ಅವಮಾನಕ್ಕೆ ಒಳಗಾಗುತ್ತಿದ್ದೇವೆ ಎಂಬ ಅರಿವು ನಮಗಿದೆ ಎಂದು ಅವರು ಹೇಳಿದ್ದಾರೆ.

“ನನ್ನ ತಂದೆ ಇಷ್ಟೆಲ್ಲ ಸಾಧನೆ ಮಾಡಿದರೂ ಅವರನ್ನು ದಲಿತ ನಾಯಕ ಎಂದೇ ಕರೆಯಲಾಗುತ್ತಿದೆ. ಅವರ ಅನೇಕ ಸಾಧನೆಗಳ ಹೊರತಾಗಿಯೂ, ಅವರು ತಮ್ಮ ಜಾತಿ ಗುಣಲಕ್ಷಣಗಳನ್ನು ಹೊಂದಿದ್ದರು. ನನ್ನ ತಂದೆ ಉಪಪ್ರಧಾನಿಯಾಗಿದ್ದರೂ, ಅವಮಾನಿಸಿ ಹಲವು ಕಡೆಯಲ್ಲಿ ಕಳಿಸಲಾಗಿತ್ತು. ಹಲವಾರು ಜಾತಿ ನಿಂದನೆಗಳಿಗೆ ಒಳಗಾದರು ಎಂದು ಅವರು ಹೇಳಿದ್ದಾರೆ.

1978ರಲ್ಲಿ ಉಪಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂಪೂರ್ಣಾನಂದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲು ಹೋದಾಗ ಬಾಬು ಜಗಜೀವನ್ ರಾಮ್ ಅವಮಾನಕ್ಕೊಳಗಾಗಿದ್ದರು.

“ಹೋಗಿ, ಜಗಜೀವನ್ ಚಮರ್‌(ಜಾತಿಸೂಚಕ ಪದ) ಎಂದು ಅವರು ಆಜ್ಞಾಪಿಸಿದರು. ಬಳಿಕ ಪ್ರತಿಮೆಯನ್ನು ಸ್ವಚ್ಛಗೊಳಿಸಲು ಗಂಗಾಜಲವನ್ನು ಬಳಸಿದರು. ಏಕೆಂದರೆ ಅದು ದಲಿತ ಮುಟ್ಟಿದ್ದರಿಂದ ಕಲುಷಿತವಾಗಿದೆ. ನೀವು ಗಮನಿಸಿ, ಜಾತಿ ವ್ಯವಸ್ಥೆಯು ಎಲ್ಲರನ್ನೂ ಆವರಿಸುತ್ತದೆ, ”ಎಂದು ಅವರು ಹೇಳಿದ್ದಾರೆ. 

ಜಾತೀಯತೆ ಏಕೆ ಬೇರೂರಿದೆ ಮತ್ತು ಅದನ್ನು ಜಯಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ರಾಜಕೀಯ ಮತ್ತು ಸಾಮಾಜಿಕ ಇಚ್ಛಾಶಕ್ತಿ ಇರಬೇಕು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News