ಚಾಮರಾಜನಗರ; ಮನೆಯ ಗೋಡೆ ಕುಸಿದುಬಿದ್ದು ಯುವಕ ಮೃತ್ಯು

Update: 2022-09-05 03:37 GMT

ಚಾಮರಾಜನಗರ: ಭಾರಿ ಮಳೆ ಹಾಗು ಸಿಡಿಲು ಬಡಿದ ಪರಿಣಾಮ ಮಲಗಿದ್ದ ಯುವಕನ ಮೇಲೆ ಮನೆಯ ಗೋಡೆ ಕುಸಿದು ಬಿದ್ದು, ಗಂಭೀರ ಗಾಯಗೊಂಡ ಯುವಕ ಮೃತಪಟ್ಟ ಘಟನೆ ಚಾಮರಾಜನಗರದ ದಡದಹಳ್ಳಿಯಲ್ಲಿ ರಾತ್ರಿ ನಡೆದಿದೆ.

ಮೃತರನ್ನು ದಡದಹಳ್ಳಿ ನಿವಾಸಿ ಮೂರ್ತಿ (33)  ಎಂದು ಗುರುತಿಸಲಾಗಿದೆ.

ಮೂರ್ತಿ ಅವರು ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಭಾರಿ ಮಳೆ ಹಾಗು ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ ಮೂರ್ತಿ ಅವರ ಮೈ ಮೇಲೆ ಬಿದ್ದಿದ್ದು, ಗಂಭೀರ ಗಾಯಗೊಂಡ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ. ಮನೆಯಲ್ಲೇ ಮಲಗಿದ್ದ ಮೂರ್ತಿಯ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News