ಸೆ.25: ಬೈಲೂರಿನಲ್ಲಿ ವೈಜ್ಞಾನಿಕ ಕೈತೋಟ ಕೃಷಿ ಮಾಹಿತಿ

Update: 2022-09-24 15:36 GMT

ಉಡುಪಿ, ಸೆ.24:  ಕಲಾಕಿರಣ್ ಕ್ಲಬ್ ಬೈಲೂರು ಕೊರಂಗ್ರಪಾಡಿ, ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ಕರ್ಣಾಟಕ ಬ್ಯಾಂಕ್ ಉಡುಪಿ ಇವರುಗಳ ಸಹಯೋಗದಲ್ಲಿ  ವೈಜ್ಞಾನಿಕ ಕೈತೋಟ ಬೆಳೆಸುವ ಬಗೆಗಿನ  ಕೃಷಿ ಮಾಹಿತಿ ಕಾರ್ಯಕ್ರಮ ಸೆ.25ರ ರವಿವಾರ ಸಂಜೆ 4 ಗಂಟೆಗೆ ಬೈಲೂರು ಕಲಾಕಿರಣ್ ಕ್ಲಬ್ ವಠಾರದಲ್ಲಿ ನಡೆಯಲಿದೆ.

ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಛೇರಿಯ ಎಜಿಎಂ ಬಿ.ರಾಜಗೋಪಾಲ್ ಉದ್ಘಾಟಿಸಲಿ ದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಸಾಧನಾಶೀಲ ಕೃಷಿಕ ಪ್ರಶಸ್ತಿ ವಿಜೇತಕುದಿ ಶ್ರೀನಿವಾಸ ಭಟ್ ಭಾಗವಹಿಸಲಿದ್ದಾರೆ.

ದಿನನಿತ್ಯದ ಅಗತ್ಯದ ವಿಷಮುಕ್ತ ಆಹಾರ, ತರಕಾರಿ, ಕಾಯಿಪಲ್ಯಗಳನ್ನು ವೈಜ್ಞಾನಿಕ ಹಾಗೂ ಕಡಿಮೆ ಖರ್ಚಿನಲ್ಲಿ ಬೆಳೆಸುವ ಕುರಿತು ಸಮಗ್ರ ಮಾಹಿತಿ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News