ಮಧುಬಂಗಾರಪ್ಪಗೆ ಅಭಿಮಾನಿಗಳಿಂದ ಅಭಿಮಾನದ ಸ್ವಾಗತ

Update: 2022-09-24 16:45 GMT

ಶಿವಮೊಗ್ಗ, ಸೆ.24: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಗಳ ಘಟಕದ  ರಾಜ್ಯಾಧ್ಯಕ್ಷರಾಗಿ ನೇಮಕವಾದ ಬಳಿಕ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸಿದ ಮಾಜಿ ಶಾಸಕ ಮಧು ಬಂಗಾರಪ್ಪನವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು.

ನಗರದ ಎಂಆರ್‌ಎಸ್ ವೃತ್ತದಲ್ಲಿ ಮಧುಬಂಗಾರಪ್ಪನವರಿಗೆ ಹೂವಿನ ಹಾರ ಹಾಕಿ,ಸನ್ಮಾನ ಮಾಡಿ ಅದ್ದೂರಿಯಾಗಿ ಸ್ವಾಗತ ಕೋರಿದ ಪಕ್ಷದ ಕಾರ್ಯಕರ್ತರು,ನಗರದಲ್ಲಿ ಬೈಕ್ ರ್‍ಯಾಲಿ ನಡೆಸಿದರು.

ಎಂ.ಆರ್.ಎಸ್ ಸರ್ಕಲ್,ವಿದ್ಯಾನಗರ, ಹೊಳೆ ಬಸ್‌ಸ್ಟಾಪ್ ಮೂಲಕ ಬಿ.ಹೆಚ್ ರಸ್ತೆಯಲ್ಲಿ ಸಾಗಿದ ಮೆರವಣಿಗೆ ಅಮೀರ್ ಅಹಮ್ಮದ್ ವೃತ್ತ,ನೆಹರೂ ರಸ್ತೆ,ಗೋಪಿ ವೃತ್ತ, ಬಾಲರಾಜ್ ಅರಸ್ ರಸ್ತೆ ಮೂಲಕ ಕಾಂಗ್ರೆಸ್ ಕಛೇರಿ ತಲುಪಿತು.

ಮೆರವಣಿಗೆ ಉದ್ದಕ್ಕೂ ವಿವಿಧೆಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಮಧುಬಂಗಾರಪ್ಪ ಅವರನ್ನು ಸನ್ಮಾನಿಸಿದರು.ಹೊಳೆ ಬಸ್ ನಿಲ್ದಾಣದ ಬಳಿ ಸೇಬು ಹಣ್ಣಿನ  ಬೃಹತ್ ಹಾರ ಹಾಕಿ ಕಾರ್ಯಕರ್ತರು ಸಂಭ್ರಮಿಸಿದರು.

ಮೆರವಣಿಗೆ ಹಾದಿ ಉದ್ದಕ್ಕೂ ಕಾರ್ಯಕರ್ತರು ಮಧುಬಂಗಾರಪ್ಪ,ಕಾಂಗ್ರೆಸ್ ಪಕ್ಷದ ಪರವಾಗಿ ಘೋಷಣೆಗಳನ್ನು ಕೂಗಿದರು.

ಟ್ರಾಫಿಕ್ ಜಾಮ್:  ಬೈಕ್ ಜಾಥಾ,ಸನ್ಮಾನಗಳಿಂದ ಬಿ.ಹೆಚ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ತುಂಗಾನದಿಯ ಎರಡು ಸೇತುವೆಗಳ ಮೇಲೆ ಕೆಲಕಾಲ ಟ್ರಾಫಿಕ್ ಜಾಮ್‌ನಿಂದ ಸವಾರರು ಸಂಕಷ್ಟಕ್ಕೆ ಸಿಲುಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News