ಅಪಘಾತದಲ್ಲಿ ಗಾಯಗೊಂಡಿದ್ದ ಮಂಡ್ಯದ ಬೆಣ್ಣೆ ಇಡ್ಲಿ ಖ್ಯಾತಿಯ ಹೋಟೇಲ್ ಶಿವಪ್ಪ ನಿಧನ
ಶ್ರೀರಂಗಪಟ್ಟಣ, ಅ.21: ತಾಲೂಕಿನ ದರಸಗುಪ್ಪೆ ಗ್ರಾಮದ ಬೆಣ್ಣೆ ಇಡ್ಲಿ ಖ್ಯಾತಿಯ ಹೊಟೇಲ್ ಮಾಲಕ ಶಿವಪ್ಪ ಅನಾರೋಗ್ಯದಿಂದ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.
ಮೂರು ದಿನದ ಹಿಂದೆ ಚನ್ನಪಟ್ಟಣದಲ್ಲಿ ಸ್ಕೂಟರ್ ನಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆದಿದ್ದರು. ಗುರುವಾರ ಅವರನ್ನು ದಿಢೀರ್ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಕೊನೆ ಉಸಿರು ಎಳೆದಿದ್ದಾರೆನ್ನಲಾಗಿದೆ.
ದರಸಗುಪ್ಪೆಯಲ್ಲಿ ಶಿವಪ್ಪ ಸಣ್ಣದಾದ ಹೊಟೇಲ್ ನಡೆಸುತ್ತಿದ್ದರು. ಅವರ ಹೊಟೇಲ್ನ ಬೆಣ್ಣೆ ಇಡ್ಲಿಗೆ ಗ್ರಾಹಕರು ಮಾರುಹೋಗಿದ್ದರು. ಹಾಗಾಗಿ ಹೊಟೇಲ್ನಲ್ಲಿ ಗ್ರಾಹಕರು ಸರತಿಸಾಲಿನಲ್ಲಿ ಕಾದು ಬೆಣ್ಣೆ ಇಡ್ಲಿ ಸವಿಯುತ್ತಿದ್ದರು. ಇದಲ್ಲದೆ, ಬೆಂಗಳೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಬೆಂಗಳೂರು, ಮೈಸೂರು, ಇತರೆ ಜಿಲ್ಲೆಯವರು ಕೂಡ ಹೊಟೇಲ್ಗೆ ಬಂದು ಇಡ್ಲಿ ತಿನ್ನುತ್ತಿದ್ದರು.
ಇದನ್ನೂ ಓದಿ: ಬೆಂಗಳೂರು: ಅರ್ಧ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಪೊಲೀಸ್ ಪೇದೆಗೆ ದಂಡ!