ಕೆಂಪು ಇರುವೆ ಕಚ್ಚಿ ಮೂರರ ಬಾಲಕ ಮೃತ್ಯು

Update: 2022-11-13 02:33 GMT

ಅಲ್ಮೋರ್ : ಕೆಂಪು ಇರುವೆ ಕಚ್ಚಿದ ಎರಡು ಗಂಟೆಯೊಳಗೆ ಮೂರು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಬಗೇಶ್ವರದಲ್ಲಿ ನಡೆದಿದೆ.

ಬಗೇಶ್ವರದ ಪೌಸಾರಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಭೂಪೇಶ್ ರಾಮ್ ಎಂಬವರ ಮಕ್ಕಳಾದ ಐದು ವರ್ಷದ ಪ್ರಿಯಾಂಶು ಮತ್ತು ಮೂರು ವರ್ಷದ ಸಾಗರ್ ಮೈದಾನದಲ್ಲಿ ಆಡುತ್ತಿದ್ದಾಗ ಕೆಂಪು ಇರುವೆ ಇಬ್ಬರಿಗೂ ಕಚ್ಚಿತ್ತು. ತಕ್ಷಣವೇ ಇಬ್ಬರ ಆರೋಗ್ಯ ಸ್ಥಿತಿ ಹದಗೆಡಲಾರಂಭಿಸಿತು ಹಾಗೂ ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸಾಗರ್ ಮಾರ್ಗದ ಮಧ್ಯದಲ್ಲಿ ಮೃತಪಟ್ಟರೆ, ಚಿಕಿತ್ಸೆಯಿಂದ ಚೇತರಿಸಿಕೊಂಡ ಪ್ರಿಯಾಂಶುವನ್ನು ಮರುದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

"ಮಕ್ಕಳ ದೇಹದ ವಿವಿಧ ಕಡೆಗಳಲ್ಲಿ ಇರುವೆ ಕಚ್ಚಿದ್ದು, ಆ ಬಳಿಕ ಮಕ್ಕಳು ಬಹುತೇಕ ಪ್ರಜ್ಞಾಹೀನರಾಗಿದ್ದರು. ಒಂದೂವರೆ ಗಂಟೆಯೊಳಗೆ ಇಬ್ಬರನ್ನೂ ಆಸ್ಪತ್ರೆಗೆ ಕರೆ ತರಲಾಗಿತ್ತು. ಅವರನ್ನು ತಪಾಸಣೆ ನಡೆಸುವ ವೇಳೆಗೇ ಸಾಗರ್ ಮೃತಪಟ್ಟಿದ್ದ. ಪ್ರಿಯಾಂಶುವಿಗೆ ಚಿಕಿತ್ಸೆ ನೀಡಿದೆವು. ದೊಡ್ಡ ಕೆಂಪು ಇರುವೆಗಳು ಅವರಿಗೆ ಕಚ್ಚಿವೆ ಎಂದು ತಂದೆ ಹೇಳಿದ್ದಾರೆ" ಎಂದು ಚಿಕಿತ್ಸೆ ನೀಡಿದ ವೈದ್ಯ ಡಾ.ರಾಹುಲ್ ಮಿಶ್ರಾ ವಿವರಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ. 

Similar News