ಕುಣಿಗಲ್ | ರಸ್ತೆ ಅಪಘಾತಕ್ಕೆ ಯುವಕ ಬಲಿ; ಇಬ್ಬರಿಗೆ ಗಾಯ

Update: 2022-11-27 05:07 GMT

ತುಮಕೂರು, ನ.27: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ (Accident) ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ರವಿವಾರ ಮುಂಜಾನೆ 3:3ರ ಸುಮಾರಿಗೆ ಕುಣಿಗಲ್ ಅಂಚೆಪಾಳ್ಯದ ಬಳಿ‌ ಸಂಭವಿಸಿರುವುದು ವರದಿಯಾಗಿದೆ.

ಮೃತರನ್ನು ಬೆಂಗಳೂರು ನಿವಾಸಿ ನರಸಿಂಹ(29) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ನಾಯಂಡನಹಳ್ಳಿ ನಿವಾಸಿಗಳಾದ ವಿಜಯ್ ಹಾಗೂ ಮನೋಜ್ ಎಂಬವರು ಗಾಯಗೊಂಡಿದ್ದು, ಅವರನ್ನು ಕುಣಿಗಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಮೂವರು ಬೆಂಗಳೂರಿನಿಂದ ಕಾರಿನಲ್ಲಿ ಹೆಬ್ಬೂರಿನಲ್ಲಿರುವ ಚಿಕ್ಜಣ್ಣನ ದೇವಸ್ಥಾನಕ್ಕೆ ಹೊರಟಿದ್ದರು. ಕಾರು ಕುಣಿಗಲ್ ಅಂಚೆಪಾಳ್ಯದ ಬಳಿ‌ ತಲುಪಿದಾಗ ಹಂಪ್ಸ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿತ್ತೆನ್ನಲಾಗಿದೆ.

 ಈ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೈಸೂರು: ವಿವಾದಕ್ಕೆ ಕಾರಣವಾಗಿದ್ದ ಬಸ್ ತಂಗುದಾಣದ ಗೋಪುರಗಳು ರಾತ್ರೋರಾತ್ರಿ ತೆರವು

Similar News