ಬೈಂದೂರು: ರೈಲು ಢಿಕ್ಕಿ; ರಿಕ್ಷಾ ಚಾಲಕ ಮೃತ್ಯು

Update: 2022-11-30 15:44 GMT

ಬೈಂದೂರು: ರೈಲ್ವೆ ಹಳಿಯ ಬಳಿ ನಡೆದುಕೊಂಡು ಹೋಗುತ್ತಿದ್ದ ರಿಕ್ಷಾ ಚಾಲಕರೊಬ್ಬರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನ.29ರಂದು ತಡರಾತ್ರಿ ವೇಳೆ ಬೈಂದೂರು ಗ್ರಾಮದ ವಿದ್ಯಾನಗರ ರೈಲ್ವೆ ಗೇಟ್ ಬಳಿ ನಡೆದಿದೆ.

ಮೃತರನ್ನು ಸಂತೋಷ ದೇವಾಡಿಗ ಎಂದು ಗುರುತಿಸಲಾಗಿದೆ. ಇವರು  ಸ್ಕೂಲ್ ಬಸ್ ಚಾಲಕರಾಗಿ ಹಾಗೂ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ರಾತ್ರಿ ಮನೆಯಿಂದ ರೈಲ್ವೇ ಸ್ಟೇಷನ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಇವರಿಗೆ ರೈಲು ಡಿಕ್ಕಿ ಹೊಡೆಯಿನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇವರು ಸ್ಥಳದಲ್ಲಿಯೇ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News