ಕೆಪಿಸಿಸಿ ಪ್ರಚಾರ ಸಮಿತಿಗೆ ನ್ಯಾಯವಾದಿ ಶಾಹುಲ್ ಹಮೀದ್ ನೇಮಕ

Update: 2023-01-17 05:15 GMT

ಬೆಂಗಳೂರು, ಜ. 17 : ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ಕಾಂಗ್ರೆಸ್ ಪಕ್ಷದ ರಾಜ್ಯ ಚುನಾವಣಾ ಪ್ರಚಾರ ಸಮಿತಿಗೆ ಪದಾಧಿಕಾರಿಗಳನ್ನು ಎಐಸಿಸಿ ನೇಮಕ ಮಾಡಿದೆ. ಬೆಂಗಳೂರಿನ ನ್ಯಾಯವಾದಿ, ಸಮಾಜ ಸೇವಕ ಶಾಹುಲ್ ಹಮೀದ್ ಅವರನ್ನು ಮುಖ್ಯ ಸಂಚಾಲಕರಾಗಿ ನೇಮಕ ಮಾಡಲಾಗಿದೆ. 

ಸಮಿತಿಗೆ ಸಹ ಅಧ್ಯಕ್ಷರನ್ನಾಗಿ ಡಾ. ಬಿ. ಎಲ್. ಶಂಕರ್ ಅವರನ್ನು ನೇಮಿಸಿದ್ದು,  ವಿಭಾಗವಾರು ಐದು ಸಹ ಅಧ್ಯಕ್ಷರು,  32 ಮುಖ್ಯ ಸಂಚಾಲಕರು , 66 ಸಂಚಾಲಕರು ಹಾಗು 37 ಸಹಸಂಚಾಲಕರು, ಮಾಧ್ಯಮ ವಿಭಾಗ, ಸೋಷಿಯಲ್ ಮೀಡಿಯಾ ವಿಭಾಗ  ಹಾಗು ಜಿಲ್ಲಾವಾರು ಅಧ್ಯಕ್ಷರನ್ನು ನೇಮಿಸಲಾಗಿದೆ. 

ಸ್ಪಷ್ಟೀಕರಣ : ಜನವರಿ 16, 2022ರ 'ವಾರ್ತಾಭಾರತಿ' ಸಂಚಿಕೆಯಲ್ಲಿ ದ.ಕ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಕೆ ಶಾಹುಲ್ ಹಮೀದ್ ಅವರನ್ನು ಮುಖ್ಯ ಸಂಚಾಲಕರಾಗಿ ನೇಮಿಸಲಾಗಿದೆ ಎಂದು ತಪ್ಪಾಗಿ ಪ್ರಕಟವಾಗಿತ್ತು.

Similar News