ನಾಟೆಕಲ್: ಎಸ್ ಬಿವಿ ಕಿನ್ಯ ರೇಂಜ್ ವತಿಯಿಂದ ಗಣರಾಜ್ಯೋತ್ಸವ

Update: 2023-01-26 05:18 GMT

ನಾಟೆಕಲ್: ಎಸ್ ಬಿವಿ ಕಿನ್ಯ ರೇಂಜ್ ವತಿಯಿಂದ 74ನೇ ಗಣರಾಜ್ಯೋತ್ಸವ ಪ್ರಯುಕ್ತ ನಾಟೆಕಲ್ ಜಂಕ್ಷನ್ ನಲ್ಲಿ ಬಾಲ ಇಂಡಿಯಾ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಶಾಸಕ  ಯು.ಟಿ.ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಧ್ವಜಾರೋಹಣವನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ನಝೀರ್ ಉಳ್ಳಾಲ ನೆರವೇರಿಸಿದರು. ಮಂಗಳ ನಗರದ ಸಂಶುಲ್ ಉಲೆಮಾ ಕಾಲೇಜಿನ ಪ್ರಾಂಶುಪಾಲ ಹನೀಫ್ ದಾರಿಮಿ ಪ್ರಾರ್ಥನೆ ನೆರವೇರಿಸಿದರು.

ಸಿರಾಜುದ್ದೀನ್ ಹುದವಿ, ಫಾರೂಕ್ ದಾರಿಮಿ, ಫಾರೂಕ್ ಕಿನ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಬ್ದುಲ್ ಅಝೀಝ್ ಮನ್ನಾನಿ ಪ್ರತಿಜ್ಞಾವಿಧಿ ಬೋಧಿಸಿದರು. ಮಂಗಳ ನಗರ ಮಸೀದಿಯ ಖತೀಬರಾದ ಆಸಿಫ್ ಅಲ್ ಅಝ್ಹರಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಎ.ಎಚ್. ತುಂಬೆ, ಲತೀಫ್ ದಾರಿಮಿ, ಮೊಯ್ದೀನ್ ಕಿನ್ಯ, ಹನೀಫ್ ನಾಟೆಕಲ್, ಸಿರಾಜ್ ದಾರಿಮಿ, ಶರೀಫ್ ಲತೀಫಿ, ನಾಸಿರ್ ಗ್ರೀನ್ ಭಾಗ್, ಅಬ್ದುಲ್ ರಹಿಮಾನ್ ಫೈಝಿ, ಹೈದರ್ ಫೈಝಿ, ಅಬೂಬಕರ್ ದಾರಿಮಿ, ಖಾದರ್ ಮುಸ್ಲಿಯಾರ್, ಜಾಬಿರ್ ಫೈಝಿ, ಇಬ್ರಾಹಿಂ ದಾರಿಮಿ, ಸಿರಾಜುದ್ದಿನ್ ಅಸ್ಸಾಫಿ, ಇಸ್ಹಾಕ್ ಹಾಜಿ, ಮೂಸಾ ಸಫರ್ ನಾಟೆಕಲ್ ಉಪಸ್ಥಿತರಿದ್ದರು.

ಎಸ್ ಬಿವಿ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು. ಕಾರ್ಯಕ್ರಮವನ್ನು ಸಂಘಟಿಸಿದ ಮುಸ್ತಫಾ ಫೈಝಿ ಕಿನ್ಯ ಸ್ವಾಗತಿಸಿದರು. ಬಶೀರ್ ರಹ್ಮಾನಿ ವಂದಿಸಿ, ಸಮ್ಮಾಸ್ ನಿರೂಪಿಸಿದರು.

Similar News