×
Ad

14 ಹೊಸ ಶಿಕ್ಷಣ ಕ್ಷೇತ್ರಗಳನ್ನು ಸೃಜಿಸಲು ಒತ್ತಾಯಿಸಿ ಸಚಿವ ಮಧು ಬಂಗಾರಪ್ಪಗೆ ಪ್ರಿಯಾಂಕ್ ಖರ್ಗೆ ಪತ್ರ

Update: 2025-08-04 21:49 IST

ಬೆಂಗಳೂರು : ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಫಲಿತಾಂಶದಲ್ಲಿ ಅತಿ ಕಡಿಮೆ ಶ್ರೇಣಿ ದೊರೆತಿರುವ ಹಿನ್ನೆಲೆಯಲ್ಲಿ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಸಲುವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 14 ಹೊಸ ಶಿಕ್ಷಣ ಕ್ಷೇತ್ರಗಳನ್ನು ಸೃಜಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು ಕೋರಿದ್ದಾರೆ.

ಬೀದರ್ (ಚಿಟಗುಪ್ಪ ಮತ್ತು ಕಮಲನಗರ), ಕಲಬುರಗಿ (ಕಾಳಗಿ, ಕಮಲಪುರ ಮತ್ತು ಯಡ್ರಾಮಿ), ಯಾದಗಿರಿ (ಗುರಮಿಠಕಲ್), ಯಾದಗಿರಿ (ಹುಣಸಗಿ), ರಾಯಚೂರು (ಅರೆಕೇರಾ, ಸಿರವಾರ ಮತ್ತು ಮಸ್ಕಿ), ಕೊಪ್ಪಳ (ಕಾರಟಗಿ ಮತ್ತು ಕುಕನೂರು), ಬಳ್ಳಾರಿ (ಕುರುಗೋಡು), ವಿಜಯನಗರ (ಕೊಟ್ಟೂರು) ಕೇಂದ್ರಗಳಲ್ಲಿ ಶಾಲಾ ಶಿಕ್ಷಣದ ಗುಣಮಟ್ಟ ಹಾಗೂ ಫಲಿತಾಂಶವನ್ನು ಹೆಚ್ಚಿಸುವ ದೃಷ್ಟಿಯಿಂದ ಹೊಸ ಶಿಕ್ಷಣ ಕ್ಷೇತ್ರಗಳನ್ನು ಜರೂರಾಗಿ ಸೃಜಿಸುವಂತೆ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News