×
Ad

ರಾಜಾರಾಂ ತಲ್ಲೂರು ಅವರ ʼಕರಿಡಬ್ಬಿʼ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವರ್ಷದ ಪುಸ್ತಕ ಬಹುಮಾನ

Update: 2025-03-08 15:29 IST

ರಾಜಾರಾಂ ತಲ್ಲೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ವರ್ಷದ ಪುಸ್ತಕ ಬಹುಮಾನ ಪ್ರಕಟಗೊಂಡಿದ್ದು, ಹಿರಿಯ ಲೇಖಕ ಹಾಗೂ ಅಂಕಣಕಾರ ರಾಜಾರಾಂ ತಲ್ಲೂರು ಅವರ ʼಕರಿಡಬ್ಬಿʼ ಕೃತಿ ಸಹಿತ 18 ಕೃತಿಗಳು ಬಹುಮಾನಕ್ಕೆ ಆಯ್ಕೆಯಾಗಿದೆ.

2022ನೇ ವರ್ಷದ ಪುಸ್ತಕ ಬಹುಮಾನ ವಿಜೇತರು:

ರಾಮು ಮೈಸೂರು-ವಿಷ್ಣು ಕ್ರಾಂತಿ ಮತ್ತು ಇತರ ಪದ್ಯಗಳು

ರೇವಣ್ಣ ಸಿದ್ದಪ್ಪ ಜಿ. ಆರ್.-ಬಾಳ ನೌಕೆಗೆ ಬೆಳಕಿನ ದೀಪ

ಸುಮಂಗಲಾ ಎಸ್. ಮಮ್ಮಿಗಟ್ಟಿ-ಬಯಲ ಬೆರಗು

ದಯಾನಂದ-ಬುದ್ಧನ ಕಿವಿ

ಬಿದರಹಳ್ಳಿ ನರಸಿಂಹಮೂರ್ತಿ-ಮಾಯಾದಂಡ

ಶ್ರೀಹರ್ಷ ಸಾಲಿಮಠ-ಡಾರ್ಕ್ ಹೂಮರ್

ಚಿಂತಾಮಣಿ ಕೊಡ್ಲೆಕೆರ-ಗಿಂಡಿಯಲ್ಲಿ ಗಂಗೆ

ಪಿ.ರಾಮಯ್ಯ-ನಾನು ಹಿಂದೂ ರಾಮಯ್ಯ ಅರವತ್ತು ವರ್ಷಗಳ ಅನುಭವ ಕಥನ

ಡಾ.ಚನ್ನಪ್ಪ ಕಟ್ಟಿ-ಕುಯಿಲು

ಸಂತೆಬೆನ್ನೂರು ಫೈಜ್ಯಟ್ರಾಜ್-ಮಗಳಿಗೆ ಹೇಳಿದ ಕಥೆಗಳು

ಡಾ.ಸುಕನ್ಯಾ ಸೊನಗಹಳ್ಳಿ-ಬೆಳೆ ರೋಗಗಳು, ಕೀಟಗಳು ಮತ್ತು ಅವುಗಳ ನಿರ್ವಹಣೆ

ಹೆಚ್.ಎನ್. ನಾಗಮೋಹನ ದಾಸ್-ಸಂವಿಧಾನ ಮತ್ತು ವಚನಗಳು

ಡಾ. ಶೈಲಜಾ ಇಂ.ಹಿರೇಮಠ-ನಿರೂಪಣೆಯಾಚೆಗೆ

ಅನಿಲ ಸಿ.ಹೊಸಮನಿ-ಡಾ. ಅಂಬೇಡ್ಕ‌ರ್ ಸಹವಾಸದಲ್ಲಿ

ರಾಜಾರಾಂ ತಲ್ಲೂರು-ಕರಿಡಬ್ಬಿ

ಪಿ.ವಿ.ನಂಜರಾಜ ಅರಸ್-ಟೀಪೂ ಮಾನ್ಯತೆ ಸಿಗದ ಸುಲ್ತಾನ್ ಅಂದು-ಇಂದು

ಮಲ್ಲಿಕಾರ್ಜುನ ಶೆಲ್ಲಿಕೇರಿ-ದೀಡೆಕರೆ ಜಮೀನು

ಪೈಯನೂರು ಕುನ್ಹಿರಾಮನ್ ಮತ್ತು ಮೋಹನ ಕುಂಟರ್-ಚಾರು ವಸಂತ

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್‌ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News