×
Ad

ಚಾಮರಾಜನಗರ | ಜಲಾಶಯದಲ್ಲಿ ಈಜಲು ಹೋಗಿದ್ದ ವ್ಯಕ್ತಿ ಮೃತ್ಯು

Update: 2024-12-30 19:26 IST

ಸಾಂದರ್ಭಿಕ ಚಿತ್ರ

ಚಾಮರಾಜನಗರ : ಇಲ್ಲಿನ ಹನೂರು ತಾಲ್ಲೂಕಿನ ಹೂಗ್ಯಂ ಸಮೀಪದ ಮಿಣ್ಣೆತ್ತಳ್ಳ ಜಲಾಶಯದಲ್ಲಿ ಈಜಲು ಹೋಗಿ ವ್ಯಕ್ತಿಯೊಬ್ಬರು ಮುಳುಗಿ ಮೃತಪಟ್ಟಿರುವಂತಹ ಘಟನೆ ಸೋಮವಾರ ಸಂಜೆ ನಡೆದಿದೆ.

ಮೃತ ವ್ಯಕ್ತಿಯನ್ನು ಕಿರಪಾತಿ ಗ್ರಾಮದ ಲರ‍್ಧನೇಷನ್ (43) ಎಂದು ಗುರುತಿಸಲಾಗಿದೆ. ಲರ‍್ಧನೇಷನ್ ತನ್ನ ಕುಟುಂಬ ಸಮೇತರಾಗಿ ಮಿಣ್ಣೆತ್ತಳ್ಳ ಜಲಾಶಯಕ್ಕೆ ಸೋಮವಾರದಂದು ಆಗಮಿಸಿ ಈಜಲು ತೆರಳಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಬೆನ್ನಲ್ಲೆ ಆಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News