ಚಾಮರಾಜನಗರ: ಕಾರು ಢಿಕ್ಕಿಯಾಗಿ ಏಳು ವರ್ಷದ ಬಾಲಕಿ ಮೃತ್ಯು
Update: 2024-02-25 15:30 IST
ಚಾಮರಾಜನಗರ : ವಾಹನ ನಿಲುಗಡೆ ಮಾಡುವಾಗ ನಡೆದ ಅಪಘಾತದಲ್ಲಿ 7 ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಮೃತ ಬಾಲಕಿಯನ್ನು ತಮಿಳುನಾಡಿನ ಧರ್ಮಪುರಿ ಮೂಲದ ಸುಶ್ಮಿತಾ (7) ಎಂದು ಗುರುತಿಸಲಾಗಿದೆ. ಮಲೆ ಮಹದೇಶ್ವರ ಬೆಟ್ಟದ ಪಾಲಾರ್ ರಸ್ತೆಯಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆಯೊಬ್ಬರು ಕಾರು ನಿಲುಗಡೆ ಮಾಡುವಾಗ ಮುಂಭಾಗದಲ್ಲಿದ್ದ ಬಾಲಕಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.