×
Ad

ಚಾಮರಾಜನಗರ: ಆನೆ ದಂತ ಕಳ್ಳ ಸಾಗಣೆ; ಆರೋಪಿಯ ಬಂಧನ

Update: 2024-08-14 14:46 IST

ಚಾಮರಾಜನಗರ : ಕರ್ನಾಟಕ ತಮಿಳುನಾಡು ರಾಜ್ಯಗಳ ಗಡಿ ಚಾಮರಾಜನಗರ ಜಿಲ್ಲೆಗೆ ಹೊಂದಕೊಂಡಿರುವ ತಮಿಳುನಾಡಿದನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಆನೆ ದಂತ ಕಳ್ಳಸಾಗಣೆ ಮಾಡುವಾಗ ಕಳ್ಳರು ಸಿಕ್ಕಿ ಬಿದ್ದಿರುವ ಘಟನೆ ವರದಿಯಾಗಿದೆ.

ಬುಧವಾರ ಮುಂಜಾನೆ ಸತ್ಯಮಂಗಲದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಗಸ್ತಿನಲ್ಲಿ ವಾಹನಗಳನ್ನು ಪರಿಶೀಲನೆ ಮಾಡುವಾಗ ಪಾಸಕುಟ್ಟೈ ಭಾಗಕ್ಕೆ ಸೇರಿದ ದುರೈಸ್ವಾಮಿ ಎಂಬ ವ್ಯಕ್ತಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಆತನ ಬಳಿ ಎರಡು ಆನೆಗಳನ್ನು ಬಚ್ಚಿಟ್ಟುಕೊಂಡಿರುವ ಸಂಗತಿ ತಿಳಿದು ವಿಚಾರಿಸಿ, ಆನೆ ದಂತ ಸಹಿತ ಆರೋಪಿಯನ್ನು ಬಂಧಿಸಲಾಯಿತು.

60 ಕಿಲೋ ತೂಕದ 2 ಆನೆ ದಂಧೆಯನ್ನು ಜಪ್ತಿ ಮಾಡಿರುವ ವಲಯ ಅರಣ್ಯಾಧಿಕಾರಿ ವಿಚಾರಣೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News