×
Ad

ಚಾಮರಾಜನಗರ: ಗೂಡ್ಸ್ ವಾಹನ- ಬೈಕ್ ಢಿಕ್ಕಿ; ಓರ್ವ ಮೃತ್ಯು

Update: 2023-08-31 12:24 IST

ಚಾಮರಾಜನಗರ: ಗೂಡ್ಸ್ ವಾಹನ ಹಾಗೂ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಿಂದುವಾಡಿ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಭೀಮನಗರದ ಬಸವಗುಡಿ ಬೀದಿ ನಿವಾಸಿ ಅರುಣ್ ಕುಮಾರ್ (28) ಎಂದು ಗುರುತಿಸಲಾಗಿದೆ.

ಗುಂಡಾಲ್ ಜಲಾಶಯದ ಬಳಿ ತೋಟಗಾರಿಕೆ ಕೆಲಸ ನಿರ್ವಹಿಸುತ್ತಿರುವ ಈತ, ತನ್ನ ಜೊತೆಯಲ್ಲಿ ಕೆಲಸ ಮಾಡುವಾತನನ್ನು ದೊಡ್ಡಿಂದುವಾಡಿ ಬಳಿ ಇಳಿಸಿ ಕೊಳ್ಳೇಗಾಲಕ್ಕೆ ಬರುತ್ತಿರುವಾಗ ಚಿಕ್ಕಿಂದುವಾಡಿ ಬಳಿ ಗೂಡ್ಸ್ ವಾಹನ ಮುಖಾಮುಖಿ ಢಿಕ್ಕಿಯಾಗಿದೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News