×
Ad

Chitapur | ಇಂಗನಕಲ ಗ್ರಾಮದಲ್ಲಿ ನೂತನ ಗ್ರಂಥಾಲಯ ಉಪಕೇಂದ್ರ ಉದ್ಘಾಟನೆ

Update: 2026-06-15 21:10 IST

ಚಿತ್ತಾಪುರ: ಗ್ರಂಥಾಲಯಗಳು ಜ್ಞಾನದ ಭಂಡಾರವಾಗಿದ್ದು, ಮನುಷ್ಯರ ಚಿಂತನೆಗೆ ದಿಕ್ಕು ನೀಡುವ ಪ್ರಮುಖ ಕೇಂದ್ರಗಳಾಗಿವೆ ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ ಹೇಳಿದರು.

ತಾಲೂಕಿನ ಇಂಗನಕಲ ಗ್ರಾಮದಲ್ಲಿ ಸೋಮವಾರ ನೂತನ ಗ್ರಂಥಾಲಯ ಉಪಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಮುತುವರ್ಜಿಯಿಂದ ಗ್ರಾಮಕ್ಕೆ ಗ್ರಂಥಾಲಯ ಸೌಲಭ್ಯ ದೊರೆತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ಗ್ರಂಥಾಲಯವು ಕೇವಲ ಪುಸ್ತಕಗಳ ಸಂಗ್ರಹಾಲಯವಲ್ಲ, ಅದು ಜ್ಞಾನದ ದೇವಾಲಯವಾಗಿದೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಹಾಗೂ ಸ್ವಯಂ ಅಧ್ಯಯನದ ಮನೋಭಾವ ರೂಪಿಸಲು ಈ ಕೇಂದ್ರ ಸಹಾಯಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಗ್ರಂಥಾಲಯದ ಪುಸ್ತಕಗಳು, ಪತ್ರಿಕೆಗಳು ಹಾಗೂ ಡಿಜಿಟಲ್ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಗದೇವಪ್ಪ ನಾಯಕ ಮಾತನಾಡಿದರು. ಗುಂಡಗುರ್ತಿ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ಬಣ್ಣಕ್ಕಿ ಅಧ್ಯಕ್ಷತೆವಹಿಸಿದ್ದರು.

ಗ್ರಾಪಂ ಮಾಜಿ ಉಪಾಧ್ಯಕ್ಷ ಸಿದ್ದಣ್ಣ ಮಗಿ, ಮಾಜಿ ಸದಸ್ಯ ಈರಣ್ಣ ದಂಡೋತಿ, ಪ್ರಮುಖರಾದ ದೇವಾನಂದ ಮಂಗಲಗಿ, ರುಕಮಶಾ ದುಕಾನದಾರ, ಹಾಜಿಸಾಬ ದುಕಾನದಾರ, ಮಲ್ಲಪ್ಪ ನಿಡಗುಂದಿ, ಶಿವಯೋಗಿ ಹೊಸಮನಿ, ಶರಣಪ್ಪ ಕದ್ದರಗಿ, ನಾಗರಾಜ ಬಂಡಿವಡ್ಡರ, ಕಲ್ಯಾಣಿ ಪೂಜಾರಿ, ದೀಪಕ ಹೊಸಮನಿ, ಯಲ್ಲಾಲಿಂಗ ನಿಡಗುಂದಿ ಸೇರಿದಂತೆ ಇತರರಿದ್ದರು.

ನಾಗರಾಜ ಗಾಯಕವಾಡ ನಿರೂಪಣೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News