×
Ad

ಎಸ್ಸೆಸ್ಸೆಫ್ ಉಪ್ಪಳ ಡಿವಿಷನ್ ಸಾಹಿತ್ಯೋತ್ಸವ : ಉಪ್ಪಳ ಸೆಕ್ಟರ್ ಪ್ರಥಮ

Update: 2026-06-01 13:07 IST

ಉಪ್ಪಳ, ಜೂನ್ 1: ಎಸ್‌ಎಸ್‌ಎಫ್ ಉಪ್ಪಳ ಡಿವಿಷನ್ ವತಿಯಿಂದ ಎರಡು ದಿನಗಳ ಸಾಹಿತ್ಯೋತ್ಸವವು ಮೇ 30 ಮತ್ತು 31ರಂದು ಅಟ್ಟೆಗೋಳಿಯಲ್ಲಿ ಅದ್ಧೂರಿಯಾಗಿ ನಡೆಯಿತು.

ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಮೂಲಕ ಯುವ ಪ್ರತಿಭೆಗಳಿಗೆ ವೇದಿಕೆಯಾಗಿದ್ದ ಈ ಉತ್ಸವದಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದರು.

ಮೇ 30ರಂದು ನಡೆದ “ಸಾಹಿತ್ಯ ಸಂಗಮ” ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತ್ಯೋತ್ಸವದ ಚೇರ್ಮನ್ ಮುಬೀನ್ ಹಿಮಮಿ ವಹಿಸಿದರು. ಸಾಹಿತ್ಯೋತ್ಸವದ ಕನ್ವೀನರ್ ಖಲೀಲ್ ಹಿಮಮಿ ಸ್ವಾಗತ ಭಾಷಣ ಮಾಡಿದರು. ಖ್ಯಾತ ಶಿಕ್ಷಕ ಹಾಗೂ ಸಾಹಿತಿ ಉಷಾಜ್ ತತ್ತಾಡನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಎಸ್‌ಎಫ್ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾದುಷ ಹಾದಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್‌ಎಸ್‌ಎಫ್ ಉಪ್ಪಳ ಡಿವಿಷನ್‌ನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ವಂದಿಸಿದರು.

ಉದ್ಘಾಟನಾ ಸಮಾರಂಭದ ಬಳಿಕ ಒಟ್ಟು 10 ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು. ತೀವ್ರ ಪೈಪೋಟಿಯ ನಡುವೆ ಉಪ್ಪಳ ಸೆಕ್ಟರ್ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಬಂದಿಯೋಡ್ ಸೆಕ್ಟರ್ ದ್ವಿತೀಯ ಹಾಗೂ ಚೇವಾರ್ ಸೆಕ್ಟರ್ ತೃತೀಯ ಸ್ಥಾನ ಗಳಿಸಿತು. ಪೈವಳಿಕೆ ಮತ್ತು ಬಾಯಾರ್ ಸೆಕ್ಟರ್‌ಗಳು ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಪಡೆದವು.

ವೈಯಕ್ತಿಕ ಪ್ರಶಸ್ತಿಗಳಲ್ಲಿ “ವಾಯ್ಸ್ ಆಫ್ ದ ಫೆಸ್ಟ್” ಗೌರವವನ್ನು ಪೈವಳಿಕೆಯ ಮಿಸ್‌ಹಬ್ ಪಡೆದರೆ, “ಪೆನ್ ಆಫ್ ದ ಫೆಸ್ಟ್” ಪ್ರಶಸ್ತಿಯನ್ನು ಉಪ್ಪಳದ ರಹೀಮ್ ತಮ್ಮದಾಗಿಸಿಕೊಂಡರು.

ಮೇ 31ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಎಸ್‌ಎಸ್‌ಎಫ್ ಉಪ್ಪಳದ ಅಧ್ಯಕ್ಷ ಮುನೀರ್ ಹಿಮಮಿ ಅಧ್ಯಕ್ಷತೆ ವಹಿಸಿದರು. ಎಸ್‌ಎಸ್‌ಎಫ್ ಉಪ್ಪಳ ಪ್ರಧಾನ ಕಾರ್ಯದರ್ಶಿ ನಾಸಿರ್ ಬೇಕೂರು ಸ್ವಾಗತ ಕೋರಿದರು. ಎಸ್‌ವೈಎಸ್ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಎಸ್‌ಎಫ್ ಕೇರಳ ರಾಜ್ಯ ಕಾರ್ಯದರ್ಶಿ ಯೂಸುಫ್ ಸಖಾಫಿ ಮುತ್ತೇಡಂ ಅವರು ಭಾಷಣ ಮಾಡಿದರು. ಎಸ್‌ಎಸ್‌ಎಫ್ ಉಪ್ಪಳ ಕಾರ್ಯದರ್ಶಿ ಖುಝೈಮ್ ಸಖಾಫಿ ವಂದಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News