×
Ad

ರಾಯಚೂರು| ಲಾರಿ- ಬೈಕ್‌ ಮುಖಾಮುಖಿ ಢಿಕ್ಕಿ: ಬೈಕ್ ಸವಾರ ಸಾವು

Update: 2025-02-19 19:56 IST

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ‌ ಕಪಗಲ್ ರಸ್ತೆಯ ಬಳಿ ಸಂಜೆ ಲಾರಿ ಹಾಗೂ ಬೈಕ್‌ ಮುಖಾಮುಖಿ ಢಿಕ್ಕಿಯಾಗಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಸಂಗಾಪುರ ಗ್ರಾಮದ ನಿವಾಸಿ ಬಸನಗೌಡ (60) ಎಂದು ಗುರುತಿಸಲಾಗಿದೆ.

ಬಸನಗೌಡ ಬೈಕ್ ನಲ್ಲಿ ಸ್ವಗ್ರಾಮದಿಂದ ರಾಯಚೂರಿಗೆ ಕೆಲಸದ ನಿಮಿತ್ತ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದರು. ಮಾನ್ವಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News