×
Ad

ಕಲಬುರಗಿ: ಕೆಎಸ್ಸಾರ್ಟಿಸಿ ಬಸ್-ದ್ವಿಚಕ್ರ ವಾಹನ ಮುಖಾಮುಖಿ ಢಿಕ್ಕಿ; ಇಬ್ಬರು ಯುವಕರು ಸಾವು

Update: 2023-09-14 08:43 IST

ಕಲಬುರಗಿ: ಕೆಎಸ್ಸಾರ್ಟಿಸಿ ಬಸ್ ಮತ್ತು ದ್ವಿ-ಚಕ್ರ ವಾಹನ ಮುಖಾಮುಖಿ ಢಿಕ್ಕಿ ಹೊಡೆದು, ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಆಳಂದ ತಾಲ್ಲೂಕಿನ ಕಡಗಂಚಿ -ಲಾಡಚಿಂಚೋಳಿ ಮಧ್ಯೆ ನಡೆದಿದೆ.

ಮೃತ ಯುವಕರನ್ನು ಲಾಡಮುಗಳಿ ಗ್ರಾಮದ ಶಶಿಕಾಂತ ಶ್ರೀಮಂತ ಕಟ್ಟಬೂರೆ (27), ಶಿವಕುಮಾರ ಅಂಬಣ್ಣ (25) ಎಂದು ಗುರುತಿಸಲಾಗಿದೆ. ಲಾಡಮುಗಳಿಯಿಂದ ಕೋರಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಅಲ್ಲಿಂದ ಲಾಡಚಿಂಚೋಳಿ ಮಾರ್ಗವಾಗಿ ಕಡಗಂಚಿಗೆ ಬರುತ್ತಿರುವಾಗ ಕಲಬುರಗಿಯಿಂದ ಆಳಂದಕ್ಕೆ ಬರುವ ಬಸ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ.

ಡಿವೈಎಸ್ಪಿ ಗೋಪಿ ಆರ್, ಸಿಪಿಐ ಭಾಸು ಚವ್ಹಾಣ್, ಪಿಎಸ್ಐ ಗಂಗಮ್ಮ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News