×
Ad

ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಆರ್. ದಿಲೀಪ್ ಕುಮಾರ್ ಆಯ್ಕೆ

Update: 2025-06-18 22:30 IST

ಆರ್. ದಿಲೀಪ್ ಕುಮಾರ್

ಬೆಂಗಳೂರು: ಆರ್. ದಿಲೀಪ್ ಕುಮಾರ್ ಅವರ ವಿಮರ್ಶಾ ಸಂಕಲನ ‘ಪಚ್ಚೆಯ ಜಗುಲಿ’ಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಯುವ ಪುರಸ್ಕಾರ ಹಾಗೂ ಕೆ.ಶಿವಲಿಂಗಪ್ಪ ಹಂದಿಹಾಳು ಅವರ ‘ನೋಟ್‌ಬುಕ್’ ಸಣ್ಣ ಕಥೆಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿಯ ಬಾಲ ಪುರಸ್ಕಾರ ಲಭಿಸಿದೆ.

ಪ್ರಶಸ್ತಿಯು ತಲಾ 50 ಸಾವಿರ ನಗದು ಹಾಗೂ ಫಲಕಗಳನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.

‘ಬಾಲ ಸಾಹಿತ್ಯ ಪುರಸ್ಕಾರ’ಕ್ಕೆ ಕನ್ನಡದ ಲೇಖಕರಾದ ಡಾ.ಬಸು ಬೇವಿನಗಿಡದ, ಡಾ.ಬೇಲೂರು ರಘುನಂದನ್, ಎಚ್.ಶಶಿಕಲಾ ಹಾಗೂ ಯುವ ಪುರಸ್ಕಾರಕ್ಕೆ ಲೇಖಕ ಟಿ.ಪಿ.ಅಶೋಕ, ವಿಕ್ರಂ ವಿಸಾಜಿ, ಜಿ.ಎಂ.ಹೆಗ್ಡೆ ಅವರು ತೀರ್ಪುಗಾರರಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News