×
Ad

ಕಡೂರು: ಸ್ಕೂಟರ್ ಗೆ ಪಿಕಪ್ ಢಿಕ್ಕಿ; ಸವಾರ ಮೃತ್ಯು, ಪಿಕಪ್ ಚಾಲಕ ಪರಾರಿ

Update: 2023-11-25 11:04 IST

ಚಿಕ್ಕಮಗಳೂರು : ಸ್ಕೂಟರ್ ಗೆ ಪಿಕಪ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ದೊಡ್ಡಘಟ್ಟ ಗೇಟ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಮೃತಪಟ್ಟ ಯುವಕನನ್ನು ಕಡೂರು ತಾಲೂಕಿನ ಬೀರೂರು ಪಟ್ಟಣದ ನಿವಾಸಿ ವಿನಾಯಕ್ (28) ಎಂದು ಗುರುತಿಸಲಾಗಿದೆ.

ತರೀಕೆರೆಯಿಂದ ಕೆಲಸ ಮುಗಿಸಿ ಬೀರೂರಿಗೆ ವಾಪಸ್ಸು ಬರುವಾಗ ಅಪಘಾವುಂಟಾಗಿದ್ದು, ಪಿಕಪ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News