×
Ad

ಮೂಡಿಗೆರೆ: ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಮೃತ್ಯು

Update: 2023-08-05 23:56 IST

ಆಶಿರ್ - ಮೃತ ಬಾಲಕ  

ಚಿಕ್ಕಮಗಳೂರು: ಆಟವಾಡಲು ಹೋದ ಬಾಲಕ ನೀರು ತುಂಬಿದ್ದ ಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಬಳಿ ಜನ್ನಾಪುರದಲ್ಲಿ ಶನಿವಾರ ವರದಿಯಾಗಿದೆ. 

ಮೃತಪಟ್ಟಿರುವ ಬಾಲಕನನ್ನು ಸುನೀಲ್ ಎಂಬುವರ ಮಗ ಆಶಿರ್ ಎಂದು ಗುರುತಿಸಲಾಗಿದೆ. 

ಸರಕಾರಿ ಕಟ್ಟಡವೊಂದರ ಕಾಮಗಾರಿ ನಡೆಯುವ ಸ್ಥಳದಲ್ಲಿ ನಿರ್ಮಾಣ ಮಾಡಿದ್ದ ಗುಂಡಿಯಲ್ಲಿ ನೀರು ತುಂಬಲಾಗಿತ್ತು. ಇಲ್ಲಿಗೆ ಮೂವರು ಬಾಲಕರು ಶನಿವಾರ ಆಟವಾಡಲು ತೆರಳಿದ್ದರು‌. ಈ ವೇಳೆ ಬಾಲಕ ಆಶಿರ್ ಗುಂಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. 

ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News