ಅಂದರ್ಬಾಹರ್: ಐದು ಮಂದಿ ಸೆರೆ
Update: 2026-05-18 20:25 IST
ಉಡುಪಿ, ಮೇ 18: ಅಂಬಲಪಾಡಿ ಗ್ರಾಮದ ಕುಂಜಿಗಡ್ಡೆ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿ ಮೇ 17ರಂದು ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಐವರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಸಿದ್ದಣ್ಣ ರೆಡ್ಡಿ(55), ಅಶೋಕ್ ದೊರೆ(38), ಪ್ರಭು(36), ಶೇಖಪ್ಪ(31), ಈರಣ್ಣ(24) ಬಂಧಿತ ಆರೋಪಿಗಳು. ಇವರಿಂದ 710ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.