×
Ad

ನಾಡೋಜ ಕಯ್ಯಾರರ ಸಮಗ್ರ ಸಂಪುಟಕ್ಕೆ ಸಿದ್ಧತೆ

Update: 2026-07-01 20:36 IST

ಉಡುಪಿ, ಜು.1: ನಾಡೋಜ ಡಾ.ಕಯ್ಯಾರ ಕಿಂಞ್ಞಣ್ಣ ರೈ ಅವರು ಈ ನಾಡಿನ ಹೆಸರಾಂತ ಕವಿ, ಸ್ವಾತಂತ್ರ ಸೇನಾನಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಶತಾಯು ಹಾಗೂ ಕರ್ನಾಟಕ ಏಕೀಕರಣದ ಹೋರಾಟಗಾರ. ಕಯ್ಯಾರರು ಕಥೆ, ಶಿಶುಗೀತೆ, ಕವನ, ನಾಟಕ, ಪಠ್ಯಪುಸ್ತಕ, ವ್ಯಾಕರಣ, ಆತ್ಮಕಥನ, ಜೀವನಚರಿತ್ರೆ, ಸಂಸ್ಕೃತ ಭಾಷಾಂತರ ರೂಪದಲ್ಲಿ 37ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.

ಅಲ್ಲದೆ ಅವರು ಹಲವು ಬಿಡಿ ಲೇಖನಗಳನ್ನು ಬರೆದಿದ್ದಾರೆ. ಇವೆೆಲ್ಲವನ್ನೂ ಕ್ರೋಢೀಕರಿಸಿ ‘ಕಯ್ಯಾರರ ಸಮಗ್ರ ಸಂಪುಟ’ವನ್ನು ರಚಿಸಿ ಪ್ರಕಟಿಸುವ ಯೋಜನೆ ಇದ್ದು, ಇದ್ದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.

ಆದ್ದರಿಂದ ಕಯ್ಯಾರರು ಬರೆದ ಬಿಡಿ ಲೇಖನ, ಭಾವಚಿತ್ರ, ಭಾಗವಹಿಸಿದ ಸಭೆ ಸಮಾರಂಭಗಳ ಆಮಂತ್ರಣ ಪತ್ರಿಕೆ, ಪತ್ರಿಕಾ ತುಣುಕುಗಳು, ಅವರ ಕುರಿತ ಲೇಖನಗಳು, ಕತೆಗಳು, ಸಂಶೋಧನಾ ಪ್ರಬಂಧಗಳು ಮತ್ತು ಅವರ ಯಾವುದೇ ಸಾಹಿತ್ಯಿಕ, ಏಕೀಕರಣದ ಹೋರಾಟ, ಸಾಮಾಜಿಕ ಕಾರ್ಯಕ್ರಮಗಳ ಮುದ್ರಿತ ಅಥವಾ ಹಸ್ತಲಿಖಿತ ಬರಹಗಳಿದ್ದಲ್ಲಿ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡುವಂತೆ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪ್ರಕಟಣೆ ಯಲ್ಲಿ ಮನವಿ ಮಾಡಿದ್ದಾರೆ.

ವಿಳಾಸ: ಡಾ.ಬಿ.ಜಗದೀಶ್ ಶೆಟ್ಟಿ, ಆಡಳಿತಾಧಿಕಾರಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಎಂಜಿಎಂ ಕಾಲೇಜು ಆವರಣ, ಕುಂಜಿಬೆಟ್ಟು ಉಡುಪಿ-576102. ಮೊಬೈಲ್: 9448868868, ಕಚೇರಿಯ ಈಮೇಲ್ ವಿಳಾಸ::rgpaiudupi@gmail.com ಕಳುಹಿಸುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News