ಸಾಲದ ಚಿಂತೆಯಲ್ಲಿ ಯುವಕ ಆತ್ಮಹತ್ಯೆ
Update: 2026-08-11 20:38 IST
ಕೊಲ್ಲೂರು, ಆ.11: ಹೊಸದಾಗಿ ಆರಂಭಿಸಿದ ಸೆಂಟ್ರಿಂಗ್ ಕೆಲಸಕ್ಕಾಗಿ ಪಡೆದ ಸಾಲದ ಚಿಂತೆಯಲ್ಲಿ ಮಾನಸಿಕವಾಗಿ ನೊಂದ ಬೆಳ್ಳಾಲ ಗ್ರಾಮದ ಮುಳ್ಳಹಕ್ಲು ಕಾಸನಕಟ್ಟೆಯ ಅನಿಲ್ ಪೂಜಾರಿ(39) ಎಂಬವರು ಆ.11 ರಂದು ಬೆಳಗಿನ ಜಾವ ಮನೆಯ ಕೊಟ್ಟಿಗೆಯ ಜಂತಿಗೆ ನೇಣು ಬಿಗಿದು ಕೊಟ್ಟಿಗೆಯ ಕಟ್ಟೆಯ ಮೇಲಿನಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.