×
Ad

ಉಡುಪಿ: ಅಪಾಯ ಆಹ್ವಾನಿಸುತ್ತಿರುವ ಕಾಂಕ್ರೀಟ್ ರಸ್ತೆಯ ಕಂಬಿಗಳು!

Update: 2025-11-09 23:16 IST

ಉಡುಪಿ: ಬನ್ನಂಜೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸನಿಹ ಹಾದುಹೋಗುವ 169ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರಿಟ್ ಕಿತ್ತೆದ್ದು ಹೋಗಿ ಗುಂಡಿಗಳು ಬಿದ್ದಿವೆ. ಇಲ್ಲಿ ಮೇಲೆದ್ದಿರುವ ಕಂಬಿಗಳು ಅಪಾಯವನ್ನು ಆಹ್ವಾನಿಸುತ್ತಿದೆ.

ವಾಹನ ಅಪಘಾತಕ್ಕೆ ಕಾರಣವಾಗಿತ್ತಿರುವ, ಈ ಸ್ಥಳದಲ್ಲಿ ಪಾದಚಾರಿಗಳು ನಡೆದು ಸಾಗುತ್ತಿರುವಾಗ ಕಂಬಿಗಳು ಕಾಲಿಗೆ ಸಿಲುಕಿ ಗಾಯಾಳಾಗಿರುವ ಘಟನೆಗಳು ನಡೆದಿವೆ. ನ.28ರಂದು ಇದೇ ಹೆದ್ದಾರಿಯಲ್ಲಿ ಆದಿಉಡುಪಿ ಹೆಲಿಪ್ಯಾಡ್ ಬಳಿಯಿಂದ ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣ ಮಠಕ್ಕೆ ಬಂದು, ಮರಳಿ ತರೆಳುವ ಹಾದಿ ಇದೆಂದು ಹೇಳಲಾಗುತ್ತಿದೆ.

ಈ ಸಂದರ್ಭ ಬೆಂಗಾವಲು ಪಡೆಯ ವಾಹನಗಳು, ಮಂತ್ರಿ ಮಹೋದಯರ ವಾಹನಗಳು ಶರವೇಗದಲ್ಲಿ ಸಾಗುತ್ತಿರುತ್ತವೆ. ಹಾಗಾಗಿ ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಕ್ಷಣವಾಗಿ ಶಿಥಿಲಗೊಂಡಿರುವ ಹೆದ್ದಾರಿ ದುರಸ್ತಿ ಪಡಿಸುವಂತೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News