×
Ad

ಯಾದಗಿರಿ | ಜಾತಿಗಣತಿ ಕಾಲಂ ನಂ 61 ರಲ್ಲಿ "ಮಾದಿಗ" ಎಂದು ಕಡ್ಡಾಯವಾಗಿ ಬರೆಸಿ: ಲಿಂಗಪ್ಪ ಹತ್ತಿಮನಿ

Update: 2025-05-04 18:33 IST

ಯಾದಗಿರಿ : ಮೇ 5 ರಿಂದ ಮೂರು ಹಂತಗಳಲ್ಲಿ ನಡೆಯಲಿರುವ ಪರಿಶಿಷ್ಟ ಜಾತಿಗಳ 101 ಉಪ ಜಾತಿಗಳ ಸಮಗ್ರ ಸಮೀಕ್ಷೆ ವೇಳೆ ಜಿಲ್ಲೆ ಸಮಸ್ತ ಮಾದಿಗ ಸಮಾಜದ ಜನರು ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 61 ರಲ್ಲಿ "ಮಾದಿಗ" ಎಂದೇ ಕಡ್ಡಾಯವಾಗಿ ಬರೆಸಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ( ಎಂಆರ್ ಎಚ್ ಎಸ್) ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ ಹೇಳಿದ್ದಾರೆ.

ಭಾನುವಾರ ಸಮಾಜದ ಹಿರಿಯ ಮುಖಂಡರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹತ್ವದ ಅವಕಾಶ ತಪ್ಪಿಸಿಕೊಂಡವರು ಸರ್ಕಾರದ ಬಹುತೇಕ ಮಹತ್ವದ ಸೌಲಭ್ಯಗಳಿಂದ ವಂಚಿತರಾಗುವುದು ಖಂಡಿತ. ಸಮೀಕ್ಷೆಗಾಗಿ ಮಾಡಿರುವ ನಿಯಮಗಳ ಪ್ರಕಾರ ಪ್ರತಿಯೊಬ್ಬರು ಸೂಕ್ತ ದಾಖಲೆಗಳನ್ನು ಹೊಂದಿ ಕೇಳುವ ಎಲ್ಲ ಮಾಹಿತಿಯನ್ನು ನೀಡುವ ಮೂಲಕ ಕಡ್ಡಾಯವಾಗಿ ಮಾದಿಗ ಎಂದು ಬರೆಯಿಸಬೇಕೆಂದು ಅವರು ಮನವಿ ಮಾಡಿದರು.

ಮೇ 5ರಿಂದ 17 ವರೆಗೆ ಗಣತಿವಾರು ಮನೆ, ಮನೆಗೆ ತೆರಳಿ ದತ್ತಾಂಶಗಳ ಸಂಗ್ರಹಣೆ ನಡೆಯುತ್ತದೆ. 2ನೇ ಹಂತದಲ್ಲಿ ಮೇ 19ರಿಂದ 21ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳನ್ನು ಏರ್ಪಡಿಸಿ ಮಾಹಿತಿ ನೀಡಲು ಅವಕಾಶ ನೀಡಲಾಗಿದೆ ಮತ್ತು ಈ ಎರಡು ಹಂತಗಳಲ್ಲಿ ಭಾಗಿಯಾಗಲು ಸಾಧ್ಯವಾಗದವರು 3ನೇ ಹಂತದ ಮೇ 19 ರಿಂದ 24 ರವರೆಗೆ ಆನ್ ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶ ನೀಡಲಾಗಿದೆ, ಸ್ವಯಂ ಘೋಷಣೆಗೆ ಆಧಾರ ನಂಬರ್ ಮತ್ತು ಜಾತಿ ಪ್ರಮಾಣ ಪತ್ರದ ಆರ್.ಡಿ.ಸಂಖ್ಯೆ ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಮಾಜದ ಮುಖಂಡರಾದ ಮಲ್ಲಣ್ಣ ದಾಸನಕೇರಿ, ಶಾಂತರಾಜ ಮೊಟನಳ್ಳಿ, ಎಂ.ಕೆ.ಬಿರನೂರ, ಗೋಪಾಲ್ ದಾಸನಕೇರಿ, ನಿಂಗಪ್ಪ ವಡ್ಡನಳ್ಳಿ, ಹಣಮಂತ ಲಿಂಗೇರಿ, ಸ್ವಾಮಿದೇವ ದಾಸನ, ಯಲ್ಲಪ್ಪ ಮಾಳಿಕೇರಿ, ಮಲ್ಲು ಕುರಕುಂದಾ, ಮಾರುತಿ ಪಸಪುಲ್ ಸೇರಿದಂತೆಯೇ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News