ತಾಂತ್ರಿಕತೆಯ ದುರ್ಬಳಕೆಯೊಂದಿಗೆ ಸೈಬರ್ ಅಪರಾಧ: ನಜ್ಮಾ ಫಾರೂಕಿ
ಮಂಗಳೂರು: ಇತ್ತೀಚೆಗೆ ನಡೆಯುತ್ತಿರುವ ಅಪರಾಧ ಗಳಲ್ಲಿ ತಾಂತ್ರಿಕತೆಯನ್ನು ದುರ್ಬಳಕೆ ಮಾಡಿ ಅಪರಾಧಗಳು ಸುಲಭವಾಗಿ ನಡೆಸಲು ಯತ್ನಿಸುತ್ತಾರೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು ಎಂದು ಮಂಗಳೂರು ಸಂಚಾರ ವಿಭಾಗದ ಸಹಾಯಕ ಆಯುಕ್ತೆ ನಜ್ಮಾ ಫಾರೂಕಿ ತಿಳಿಸಿದ್ದಾರೆ.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಹಾಗೂ ಸಂತ ಅಲೋಶಿಯಸ್ ತಾಂತ್ರಿಕ ವಿದ್ಯಾಲಯದ ಸಹಭಾಗಿತ್ವದಲ್ಲಿ ಕಾಲೇಜು ಸಭಾಂಗಣದಲ್ಲಿ ಸೈಬರ್ ಅಪರಾಧ ಹಾಗೂ ಮಾದಕ ವ್ಯಸನ ಮತ್ತು ಸಂಚಾರ ನಿಯಮದ ಬಗ್ಗೆ ಇತ್ತೀಚೆಗೆ ಮಾಹಿತಿ ಹಾಗೂ ಜಾಗೃತಿ ಮೂಡಿ ಸುವ ಕಾರ್ಯಕ್ರಮವನ್ನು ದ್ದೇಶಿಸಿ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಇಂತಹ ದಂಧೆ ಗಳಲ್ಲಿ ತೊಡಗಿಸಿ ಕೊಂಡ ವರು ಹೆಚ್ಚಾಗಿ. ಯುವಜನರನ್ನೇ ಗುರಿಯಾಗಿಸಿ ಕೊಂಡು ಪ್ರಚೋದನೆ ನೀಡುತ್ತಾರೆ. ಮನುಷ್ಯನ ಅತೀ ಹತ್ತಿರದ ಹಾಗೂ ಅತೀ ದೊಡ್ಡ ಸ್ನೇಹಿತ ಸದಾ ನಾವು ಬಳಸುತ್ತಿರುವ ಮೊಬೈಲ್ ಫೋನ್ ಮೂಲಕವೇ ನಮಗೆ ತಿಳಿಯದೆ ಸೈಬರ್ ಕ್ರೈo ಹುಟ್ಟಿಕೊಳ್ಳುತ್ತದೆ . ನಾವು ಯಾವುದೇ ವಸ್ತುಗಳನ್ನು ಖರೀದಿ ಸುವ ಸಂದರ್ಭದಲ್ಲಿ ಅಥವಾ ಯಾವುದೇ. ಕಚೇರಿ ಗಳಲ್ಲಿ ವ್ಯವಹರಿಸುವ ಸಂದರ್ಭ ದಲ್ಲಿ ನಮ್ಮ ಫೋನ್ ನಂಬರ್, ನಮ್ಮ ಆಧಾರ್ ಕಾರ್ಡ್ ನೊಂದಣಿ ಸಂಖ್ಯೆಯೂ ಸೇರಿದಂತೆ ನಮ್ಮ ವೈಯುಕ್ತಿಕ ಮಾಹಿತಿಯನ್ನು ಪಡೆಯುತ್ತಾರೆ. ಆದರೆ ಇದನ್ನೇ ಅಧಾರವಾಗಿ ಇಟ್ಟು ಕೊಂಡು ಆ ಕಚೇರಿ ಯಲ್ಲಿ ದುಡಿಯುತ್ತಿರುವ ಕೆಲವೆಂದರೆ ಕಿಡಿಗೇಡಿಗಳು ದುರುಪಯೋಗಿಸುವ ಸಾಧ್ಯತೆ ಗಳು ಇವೆ. ಪೊಲೀಸ್ ಇಲಾಖೆಯ ತನಿಖೆ ಗಳಿಂದ ಇಂತಹ ಅನೇಕ ಘಟನೆಗಳು ಕಂಡು ಬಂದಿವೆ. ಅಪರಿಚಿತರಿಗೆ ವೈಯುಕ್ತಿಕ ಮಾಹಿತಿಗಳನ್ನು ನೀಡ ದoತೆ ಎಚ್ಚರಿಕೆ ವಹಿಸಿ ಬೇಕು ಎಂದರು. ಮಾದಕ ದ್ರವ್ಯ ಜಾಲ ವಿದ್ಯಾರ್ಥಿಗಳನ್ನೇ ಗುರಿಯಾಗಿಟ್ಟು ಕೊಂಡು ಹೆಚ್ಚಾಗಿ ನಡೆಸಲಾಗುತ್ತಿದೆ.ಇಂತಹ ಕೃತ್ಯ ಗಳಲ್ಲಿ ತೊಡಗಿಸಿ ಕೊಂಡಿರುವವರಿಂದ ಎಚ್ಚರದಿಂದಿರ ಬೇಕು ಹಾಗೂ ಅಂತಹವರನ್ನು ಗುರುತಿಸಿ ಪೊಲೀಸ್ ರಿಗೆ ಮಾಹಿತಿ ನೀಡಬೇಕು ಎಂದರು.
ಇದೇ ಸಂದರ್ಭ ದಲ್ಲಿ ಅವರು ಸಂಚಾರ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಸಂಚಾರ ವ್ಯವಸ್ಥೆ ಹಾಗೂ ಉಲ್ಲಂಘನೆಯ ಶಿಕ್ಷೆ ಹಾಗೂ ಪರಿಣಾಮವನ್ನು ತಿಳಿಸಿದರು.
ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ವಂ.ಜಾನ್ ಡಿಸೋಜ ಎಸ್ ಜೆ ,ಪ್ರಾಂಶುಪಾಲ ರೋಶನ್ ಡಿ ಸೋಜ. ರೋಟರಿ ಕ್ಲಬ್ ಆಫ್ ಮಂಗ ಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ ,ಕಾರ್ಯದರ್ಶಿ ವಿಕಾಸ್ ಕೋಟ್ಯಾನ್ , ಯೂಥ್ ಸರ್ವಿಸ್ ಡೈರೆಕ್ಟರ್ ಜಾಕ್ಸನ್, ರೋ ಅನಿಲ್ ಆಳ್ವ, ಉಪ ಪ್ರಾಂಶುಪಾಲ ಆಲ್ವಿನ್ ಮೆನೇಜಸ, ಟ್ರೈನಿಂಗ್ ಆಫೀಸರ್ ಗಳಾದ ನೋಯಲ್ ಲೋಬೋ ಮತ್ತು ವಿಲ್ಸನ್ , ಶಿಕ್ಷಕರು ಉಪಸ್ಥಿತರಿದ್ದರು.