×
Ad

ಕರಾವಳಿ ಉತ್ಸವ ಹಿನ್ನೆಲೆ| ಜ.4-5, 11-12ರಂದು ನಿಗದಿತ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಲು ಸೂಚನೆ

Update: 2025-01-03 22:23 IST

ಸಾಂದರ್ಭಿಕ ಚಿತ್ರ

ಮಂಗಳೂರು: ದ.ಕ. ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಕರಾಾವಳಿ ಉತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿ ನಗರದ ಕದ್ರಿ ಪಾರ್ಕ್ ಆವರಣದಲ್ಲಿ ಜ.5ರಂದು ಕಾರು ಮತ್ತು ಬೈಕ್ ಶೋ, ಜ.5ರಂದು ಯುವಮನ ರಸ ಮಂಜರಿ ಕಾರ್ಯಕ್ರಮ ನಡೆಯಲಿದೆ. ಜ.11,12ರಂದು ನಡೆಯುವ ಕಲಾಪರ್ಬ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಹಿನ್ನೆಲೆಯಲ್ಲಿ ಈ ನಾಲ್ಕು ದಿನಗಳಲ್ಲಿ ಕಾರ್ಯಕ್ರಮಕ್ಕೆ ಬರುವವರು ವಾಹನಗಳನ್ನು ನಿಗದಿತ ಸ್ಥಳಗಳಲ್ಲಿ ಪಾರ್ಕ್ ಮಾಡಲು ನಗರ ಪೊಲೀಸ್ ಆಯುಕ್ತ ಸೂಚಿಸಿದ್ದಾರೆ.

ಪದುವಾ ಮೈದಾನ, ಪದುವಾ ಶಾಲಾ ಮೈದಾನ, ಡಿಂಕಿ ಡೈನ್ ಹೊಟೇಲ್ ವಠಾರ, ಬಿಎಸ್‌ಎನ್‌ಎಲ್ ಕಚೇರಿ ವಠಾರ, ಕೆಪಿಟಿ ಬಳಿ ಇರುವ ಆರ್‌ಟಿಒ ಮೈದಾನದಲ್ಲಿ, ಸರ್ಕ್ಯೂಟ್ ಹೌಸ್ ವಠಾರದಲ್ಲಿ ಪಾರ್ಕ್ ಮಾಡಬಹುದಾಗಿದೆ.

ಕದ್ರಿ ಪಾರ್ಕ್ ರಸ್ತೆಯಲ್ಲಿ ಅಂದರೆ ಪದುವಾ ಕೊಚ್ಚಿನ್ ಬೇಕರಿಯಿಂದ ಸರ್ಕ್ಯೂಟ್ ಹೌಸ್ ಜಂಕ್ಷನ್‌ವರೆಗೆ ಎಲ್ಲಾ ತರದ ವಾಹನ ಗಳ ಸಂಚಾರವನ್ನು ನಿಷೇಧಿಸಲಾಗಿದೆ. ನಗರದ ಕೆಪಿಟಿ ವೃತ್ತದಿಂದ ಬಟ್ಟಗುಡ್ಡೆ, ಬಿಜೈ ಕೆಎಸ್‌ಆರ್‌ಟಿಸಿ, ಲಾಲ್‌ಭಾಗ್-ಕರಾವಳಿ ಉತ್ಸವ ಮೈದಾನದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News