ಶಿರಾಡಿ ಘಾಟ್ ಬಳಿ ಅಪಘಾತ: ಒರಿಸ್ಸಾ ಮೂಲದ ಇಬ್ಬರು ಸ್ಥಳದಲ್ಲೇ ಮೃತ್ಯು
Update: 2023-12-06 22:23 IST
ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಕೆಂಪು ಹೊಳೆ ಬಳಿ ವಾಹನವೊಂದು ಅಪಘಾತಕ್ಕೀಡಾಗಿ ಒರಿಸ್ಸಾ ಮೂಲದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಬುಧವಾರ ನಸುಕಿನ ವೇಳೆ ಶಿರಾಡಿ ಘಾಟ್ನ ಗಡಿ ದೇವಸ್ಥಾನದ ಮೇಲ್ಭಾಗದಲ್ಲಿನ ಕೆಂಪುಹೊಳೆ ಬಳಿ ಈ ದುರ್ಘಟನೆ ಸಂಭವಿಸಿದೆ.
ಹಾಸನದಿಂದ ಮಂಗಳೂರಿನತ್ತ ಸರಕು ಒಯ್ಯುತ್ತಿದ್ದ ಮಿನಿ ಲಾರಿಗೆ ಯಾವುದೋ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ. ಈ ಅವಘಡದಿಂದ ಸಂಪೂರ್ಣ ಜಖಂಗೊಂಡ ಮಿನಿ ಲಾರಿಯಲ್ಲಿ ಸಿಲುಕಿದ ಚಾಲಕ ಒರಿಸ್ಸಾ ಮೂಲದ ಅಮೂಲ್ಯ ಪೆರಿಡಾ (23) ಹಾಗೂ ಇನ್ನೋರ್ವ ಸಾಂತಿರ್ನಿಶ್ ಜೂಟಿ (27) ಎಂಬವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಅಪಘಾತದ ಬಳಿಕ ಢಿಕ್ಕಿ ಹೊಡೆದ ವಾಹನ ನಿಲ್ಲದೆ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಸಕಲೇಶಪುರದ ಗ್ರಾಮಾಂತರ ಪೋಲಿಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.