×
Ad

ಮಂಗಳೂರು: ಚಿನ್ನದ ಸರ ಕಸಿದು ಪರಾರಿ

Update: 2023-11-18 22:58 IST

ಮಂಗಳೂರು: ನಗರದ ಗಾಂಧಿನಗರದ ಜಿಮ್‌ಗೆ ನಡೆದುಕೊಂಡು ಹೋಗುತ್ತಿದ್ದ ಕಾವೂರಿನ ಹರ್ಷಿತ್ ರೈ ಎಂಬವರ ಚಿನ್ನದ ಸರವನ್ನು ಕಸಿದು ಪರಾರಿಯಾದ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.17ರಂದು ಸಂಜೆ 5ಕ್ಕೆ ಹರ್ಷಿತ್ ರೈ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಕಸಿದು ಪರಾರಿಯಾದ ಎನ್ನಲಾಗಿದೆ.

ಸುಮಾರು 30 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯು ಕಪ್ಪುಬಣ್ಣದ ಸ್ಕೂಟರ್‌ನಲ್ಲಿ ಹಿಂಬದಿಯಿಂದ ಬಂದು ತನ್ನ ಕುತ್ತಿಗೆಗೆ ಕೈ ಹಾಕಿ ಅಂದಾಜು 16 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದಿದ್ದಾನೆ. ಈ ವೇಳೆ ತಾನು ಸರವನ್ನು ಹಿಡಿದಿದ್ದು, ಅರ್ಧ ಸರ ತುಂಡಾಗಿದೆ. ಸುಲಿಗೆಯಾದ ಚಿನ್ನದ ಸರದಲ್ಲಿ ಉಳಿದ ತುಂಡು ಸುಮಾರು 8 ಗ್ರಾಂ ಇದ್ದು, ಇನ್ನೊಂದು 8 ಗ್ರಾಂ ತೂಕದ ಸರ ಅಪರಿಚಿತನ ಕೈಯಲ್ಲಿ ಹೋಗಿದೆ. ಅಪರಿಚಿತ ವ್ಯಕ್ತಿಯು ಗೆರೆಗಳಿರುವ ಬಿಳಿ ಬಣ್ಣದ ಉದ್ದ ತೋಳಿನ ಶರ್ಟ್ ಹಾಗೂ ಸಿಮೆಂಟ್ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News