×
Ad

ಮಲ್ಲೂರು ದೆಮ್ಮಲೆ ಮಸೀದಿ ಅಧ್ಯಕ್ಷರಾಗಿ ಹಾಜಿ ಎಂ.ಡಿ. ಅಬ್ದುಲ್ ರಹ್ಮಾನ್ ಆಯ್ಕೆ

Update: 2025-01-17 23:43 IST

ಮಂಗಳೂರು: ಮಲ್ಲೂರು ದೆಮ್ಮಲೆಯ ಬದ್ರಿಯಾ ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆಯು ಶುಕ್ರವಾರ ಜರುಗಿತು. ಮಾಜಿ ಅಧ್ಯಕ್ಷ ಹಾಜಿ ಮುಹಮ್ಮದ್ ಇಕ್ಬಾಲ್ ದೆಮ್ಮಲೆ ಅಧ್ಯಕ್ಷತೆ ವಹಿಸಿದ್ದರು. 2025-26ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಹಾಜಿ ಅಬ್ದುಲ್ ರಹ್ಮಾನ್ ದೆಮ್ಮಲೆ, ಉಪಾಧ್ಯಕ್ಷರಾಗಿ ಎಂ.ಎಚ್. ಹಸನ್‌ಬಾವ, ಪ್ರಧಾನ ಕಾರ್ಯದರ್ಶಿಯಾಗಿ ಆಸೀಫ್ ದೆಮ್ಮಲೆ, ಜೊತೆ ಕಾರ್ಯದರ್ಶಿಯಾಗಿ ಎಂ.ಡಿ. ಉಬೈದುಲ್ಲಾ, ಮುಹಮ್ಮದ್ ಆಲಿ ಮಲ್ಲೂರು, ಕೋಶಾಧಿಕಾರಿ ಯಾಗಿ ಎಂ.ಜಿ. ಬಶೀರ್ ಗಾಣೆಮಾರ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿಗೆ 30 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News