ಉಳ್ಳಾಲ ತಾಲೂಕು ಮಟ್ಟದ ಕೆಡಿಪಿ ಸಭೆ; ಹಲವು ವಿಷಯಗಳ ಬಗ್ಗೆ ಚರ್ಚೆ
ಉಳ್ಳಾಲ: ಇಲ್ಲಿನ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಹಪೂರೈಕೆಯಾಗುವ ಮೊಟ್ಟೆ ರೇಟಿನ ವಿಚಾರ ಪ್ರಧಾನವಾಗಿ ಚರ್ಚೆಗೊಂಡರೆ ಉಳಿದಂತೆ ರಾಜಕಾಲುವೆ ಒತ್ತುವರಿ, ವಿಶೇಷಚೇತನ ಮಕ್ಕಳ ವಿಶೇಷ ಸಭೆ, ಖಾಲಿಯಿರುವ ಅಂಗನವಾಡಿ ಶಿಕ್ಷಕಿಯರ ನೇಮಕಾತಿ, ಎಸ್ ಎಸ್ ಎಲ್ಸಿ ಫಲಿತಾಂಶ ಇನ್ನಷ್ಟು ಉತ್ತಮವಾಗಲು ಶಿಕ್ಷಕರ ನೇಮಕ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ನೇಮಕಾತಿ, ವಸತಿ ನಿಲಯಗಳ ಸಮಸ್ಯೆ, ನಿಯಮಾನುಸಾರ ಕೊರಗ ಸಮುದಾಯದ ಸಭೆ ನಡೆಸುವುದು ಹಾಗೂ ರಸ್ತೆ ದುರಸ್ತಿ ಹಾಗೂ ಮಳೆ ಸಂದರ್ಭ ಸುರಕ್ಷಾ ಕ್ರಮಗಳನ್ನು ಕಾಯ್ದಿರಿಸುವ ಕುರಿತು ಚರ್ಚೆಗಳು ನಡೆಯಿತು.
ಅವರು ಕಲ್ಲಾಪು ಖಾಸಗಿ ಸಭಾಂಗಣದಲ್ಲಿ ನಡೆದ ಉಳ್ಳಾಲ ತಾಲೂಕು ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.
ವಿವಿಧ ಇಲಾಖೆಗಳಲ್ಲಿ ಇರುವ ಸಮಸ್ಯೆ ಗಳಿಗೆ ಪರಿಹಾರ ಕಂಡು ಕೊಳ್ಳುವ ಕೆಲಸ ಆಗಬೇಕು. ಈ ಬಾರಿ ಕೆಡಿಪಿ ಸಭೆಯಲ್ಲಿ ಏನು ಚರ್ಚೆ ಆಗಿದೆಯೋ ಅವುಗಳಿಗೆ ಯಾವ ರೀತಿಯಲ್ಲಿ ಪರಿಹಾರ ಒದಗಿಸಿದ್ದೀರಿ ಎಂಬ ವರದಿಗಳನ್ನು ಮುಂದಿನ ಸಭೆಯಲ್ಲಿ ನೀಡಬೇಕು ಎಂದು ಸ್ಪೀಕರ್ ಯುಟಿ ಖಾದರ್ ವಿವಿಧ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಅಂಗನವಾಡಿಗೆ 101 ಸ್ವಂತ ಕಟ್ಟಡ ಇದೆ.ಕೆಲವು ಬಾಡಿಗೆ ಕಟ್ಟಡದಲ್ಲಿ ಇವೆ 29 ಕಟ್ಟಡಗಳ ಅವಶ್ಯಕತೆ ಇದೆ . ಕೆಲವು ಕಟ್ಟಡ ಗೂಡು ತರ ಇದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಮನ ಸೆಳೆದರು.
ಈ ಬಗ್ಗೆ ಸ್ಪೀಕರ್ ಯುಟಿ ಖಾದರ್ ಅವರು, ಅಂಗನವಾಡಿ ಸಮಸ್ಯೆ ವಿಚಾರದಲ್ಲಿ ಎಲ್ಲಾ ಗ್ರಾಮ ಪಂಚಾ ಯತ್ ಕಾಳಜಿ ವಹಿಸಬೇಕು. ಸರ್ಕಾರಿ ಶಾಲೆಗಳ ಹತ್ತಿರ ಅಂಗನವಾಡಿ ಇರಬೇಕು.ಒಂದೇ ಕಡೆ ಇದ್ದರೆ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ. ಎಷ್ಟು ಸರ್ಕಾರಿ ಶಾಲೆಯಲ್ಲಿ ಅಂಗನವಾಡಿ ಪ್ರಾರಂಭಿಸಬಹುದು ಎಂದು ಪರಿಶೀಲನೆ ನಡೆಸಿ ವರದಿ ಒಪ್ಪಿಸಬೇಕು. ದರ್ಗಾ ಅಧೀನದ ಶಾಲೆಗಳಲ್ಲಿ ಅಂಗನವಾಡಿ ಆರಂಭಿ ಸಲು ದರ್ಗಾ ಅಧ್ಯಕ್ಷ ಜೊತೆ ಮಾತುಕತೆ ನಡೆಸಿ ಶಾಲೆ ಹತ್ತಿರ ಅಂಗನವಾಡಿ ಸ್ಥಾಪನೆಗೆ ನಿವೇಶನ ಕೊಡುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು
ಮೂರು ವರ್ಷದಿಂದ ಆರು ವರ್ಷಗಳ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಆಹಾರ ನೀಡಲಾಗು ತ್ತದೆ. ಆಹಾರ ಪಟ್ಟಿ ಬದಲಾಗುತ್ತಾ ಇರುತ್ತದೆ. ಸರ್ಕಾರ ಸೂಚಿಸಿದ ಆಹಾರ ಅಂಗನವಾಡಿ ಯಿಂದ ನೀಡು ತ್ತೇವೆ. ಮೊಟ್ಟೆಗೆ ಸರ್ಕಾರ ದಿಂದ 6 ರೂ. ಸಿಗುತ್ತದೆ. ಆದರೆ ಒಂದು ಮೊಟ್ಟೆ ಗೆ 6.80 ರೂ. ಆಗುತ್ತದೆ. ರಖಂನಲ್ಲಿ ಖರೀದಿಸಿ ತಂದಿಟ್ಟರೆ ಮೊಟ್ಟೆ ಹಾಳಾಗುತ್ತದೆ.ಈ ಸಮಸ್ಯೆ ಇತ್ಯರ್ಥ ಪಡಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಸಭೆಯಲ್ಲಿ ವಿನಂತಿಸಿದರು.
ಈ ಬಗ್ಗೆ ಚರ್ಚೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲು ಪ್ರಯತ್ನಿಸುತ್ತೇನೆ. ಮಕ್ಕಳ ಆಹಾರ ವಿತರಣೆ ಯಲ್ಲಿ ಕೊರತೆ ಮಾಡುವುದು ಬೇಡ ಎಂದು ಸ್ಪೀಕರ್ ಯುಟಿ ಖಾದರ್ ಭರವಸೆ ನೀಡಿದರು.
ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಒಬ್ಬರು ವೈದ್ಯರು ಇದ್ದಾರೆ. ತಾಲೂಕಿನಲ್ಲಿ ಶೇ.50 ಸಿಬ್ಬಂದಿ ಕೊರತೆ ಇದೆ. ವೈದ್ಯರು ನೀಟ್ ಪರೀಕ್ಷೆ ಬೇರೆ ಬೇರೆ ಕಾರಣದಿಂದ ಗೈರಾಗುತ್ತಾರೆ. ಕೆರೆ ಬೈಲ್, ಕುಂಪಲ,ದಲ್ಲಿ ಇರುವ ನಮ್ಮ ಕ್ಲಿನಿಕ್ ನಲ್ಲಿ ವ್ಯವಸ್ಥೆ ಇದೆ. ಕೆಲವು ಬಾರಿ ಔಷಧಿ ಕೊರತೆ ಆಗುವುದಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಸುಜಯ್ ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್ ನಿಮ್ಮ ಕೆಲಸ ಏನಿದೆಯೋ ಅದನ್ನು ಮಾಡಿಕೊಂಡು ಬನ್ನಿ.ಕೇವಲ ಸಭೆಯಲ್ಲಿ ಮಾತ್ರ ಸಮಸ್ಯೆ ಹೇಳಬೇಡಿ. ಸಮಸ್ಯೆ ಏನು ಆಗುತ್ತದೆಯೋ ಅದನ್ನು ಶೀಘ್ರ ಇತ್ಯರ್ಥ ಪಡಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದರು.
ಬಿಇಒ ಈಶ್ವರ್ ಮಾತನಾಡಿ, ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ 113 ಶಾಲೆಗಳಿವೆ.18 ಹೈಸ್ಕೂಲ್ ಇದೆ. ಈ ಬಾರಿ ಶೇ.89.74 ಫಲಿತಾಂಶ ಸಾಧಿಸಿದೆ.2347 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪೈಕಿ 81 ಮಕ್ಕಳು ಅನುತ್ತೀರ್ಣ ಆಗಿದ್ದಾರೆ. ಮುರಾರ್ಜಿ ದೇಸಾಯಿ ಶಾಲೆಗೆ ಶಿಕ್ಷಕರು ಇಲ್ಲ.ತಲಪಾಡಿ, ಅಸೈಗೋಳಿಯ ಶಾಲೆ ಯಲ್ಲಿ ಶಿಕ್ಷಕರ ಕೊರತೆಯಿದೆ. ಕೆಲವು ಶಾಲೆಗಳಲ್ಲಿ ಎಲ್ ಕೆಜಿ ಯುಕೆಜಿ ಆರಂಭಿಸಲು ಕೊಠಡಿ ಕೊರತೆ ಇದೆ.ಎಲ್ ಕೆಜಿ ಆರಂಭಿಸಲು ಎಸ್ ಡಿಎಂಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ವರದಿ ಮಂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ಎಷ್ಟು ಶಾಲೆಗಳಲ್ಲಿ ಕೊಠಡಿ ಕೊರತೆ ಇದೆ. ಯಾವ ಶಾಲೆಗೆ ಕೊಠಡಿ ಅಗತ್ಯ ಇದೆ ಎಂಬ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
ಈ ಬಾರಿ ಮಳೆ ಬೇಗ ಆರಂಭ ಆಗಿರುವುದರಿಂದ ಮುಂಗಾರು ಪೂರ್ವ 10 ಕೃಷಿಕರ ಬೆಳೆ ಹಾನಿಯಾ ಗಿದೆ. ಮುಂಗಾರು ಬಂದ ಬಳಿಕ ಐದು ಕೃಷಿಕರ ಬೆಳೆ ಹಾನಿಯಾಗಿದೆ. ಹಾನಿಯಾದ ಕೃಷಿಯಲ್ಲಿ ಜಾಸ್ತಿ ಅಡಿಕೆ ತೋಟ.ಈ ಬಗೆ ಪರಿಶೀಲನೆ ನಡೆಸಿ ಪರಿಹಾರ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿದರು.
ಈ ಬಾರಿ ಮಳೆಗೆ ವಿದ್ಯುತ್ ಸಮಸ್ಯೆ ದೊಡ್ಡ ಮಟ್ಟಿನ ಆಗಿಲ್ಲ. ಮಳೆಗೆ ಆದ ಹಾನಿಯನ್ನು ಶೀಘ್ರ ಇತ್ಯರ್ಥ ಪಡಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿ ದಯಾನಂದ ಸಭೆಗೆ ಮಾಹಿತಿ ನೀಡಿದರು.
ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ನಗರ ಸಭೆ ಅಧ್ಯಕ್ಷ ಶಶಿ ಕಲ ಅವರು ನೀವು ಸಾಮಾನ್ಯ ಸಭೆಗೆ ಬರು ವುದಿಲ್ಲ. ವಿದ್ಯುತ್ ಸಮಸ್ಯೆ ಬಗ್ಗೆ ಕರೆ ಮಾಡಿದರೆ ಕಚೇರಿಯಲ್ಲಿ ಫೋನ್ ರಿಸೀವ್ ಮಾಡುವುದಿಲ್ಲ. ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಸ್ಪಂದನ ಮಾಡಬೇಕಲ್ಲವೇ ಎಂದರು.
ಈ ವೇಳೆ ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್ ಅವರು ಮೊದಲು ತಾಲೂಕು ವ್ಯಾಪ್ತಿಯ ಸಮಸ್ಯೆ ನೋಡಿ. ಫೋನ್ ರಿಸೀವ್ ಮಾಡಲು ಸಿಬ್ಬಂದಿ ಗೆ ಸೂಚನೆ ನೀಡಿ. ಗೃಹ ಜ್ಯೋತಿ ಸಂಬಂಧ ಪಟ್ಟ ಸಮಸ್ಯೆ ಗಳಿಗೆ ಪರಿಹರಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಿಗೆ ತಿಳಿಸುತ್ತೇನೆ ಎಂದು ಸೂಚನೆ ನೀಡಿದರು.
ನಗರಸಭೆ ಪೌರಾಯುಕ್ತ ನವೀನ್ ಹೆಗ್ಡೆ, ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ, ಕೋಟೆ ಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪ್ರಮೋದ್ ಮಳೆ ಹಾನಿ ಹಾಗೂ ನೀಡಲಾದ ಪರಿಹಾರ ದ ಬಗೆ ವರದಿ ಮಂಡಿಸಿದರು.
ಈ ಸಭೆಯಲ್ಲಿ ತಹಶೀಲ್ದಾರ್ ಪುಟ್ಟರಾಜು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಗುರುದತ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಫೀಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ,ನಗರಸಭೆ ಅಧ್ಯಕ್ಷೆ ಶಶಿಕಲಾ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸುರೇಖ, ತಾಲೂಕು ಅಧ್ಯಕ್ಷ ರಫೀಕ್ ಉಪಸ್ಥಿತರಿದ್ದರು.