×
Ad

ಹಿರಿಯರ ಕ್ರೀಡಾಕೂಟ: ಅಬ್ದುಲ್ ಲತೀಫ್ ರಾಜ್ಯ ಮಟ್ಟಕ್ಕೆ ಆಯ್ಕೆ

Update: 2023-11-02 22:32 IST

ಮಂಗಳೂರು: ಮಂಗಳೂರು ಮಾಸ್ಟರ್ಸ್‌ ಅತ್ಲೆಟಿಕ್ ಅಸೋಸಿಯೇಶನ್ (ರಿ) ಆಶ್ರಯದಲ್ಲಿ ನಗರದ ಮಂಗಳಾ ಕ್ರೀಡಾಂಗಣದಲ್ಲಿ ರವಿವಾರ ನಡೆದ ಡಿಕೆ ಮಾಸ್ಟರ್ಸ್‌ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರು ತಾಲೂಕಿನ ಕಾವು ಅಬ್ದುಲ್ ಲತೀಫ್ ಸಾಹೇಬ್ 5 ಕಿ.ಮಿ ನಡಿಗೆ ಮತ್ತು ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

100 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗಿಟ್ಟಿಸಿಕೊಂಡಿರುವ ಇವರು ಧಾರವಾಡ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News