ಪ್ರಧಾನಿಯ - ಅಸ್ಸಾಂ ಟೀ ನಂಟು ಹೇಳಿಕೆಗೆ ನಕ್ಕು ಬಿಟ್ಟ ಟ್ವಿಟ್ಟರ್

Update: 2016-03-26 12:54 GMT

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶಾಂಘೈ ಚಿತ್ರಗಳನ್ನು ಫೋಟೋಶಾಪ್ ಮಾಡಿ ಅಹ್ಮದಾಬಾದ್ ಚಿತ್ರ ಎಂದು ನಂಬಿಸಿದ್ದೆ . ಅದಕ್ಕಾಗಿ ನನ್ನ ಮೇಲೆ ಚೀನಾದ ಋಣ ಇದೆ. 

- ಸುಮಿತ್ ರಾಯ್  

ಅಸ್ಸಾಂ ನಲ್ಲಿ ಶನಿವಾರ ಚುನಾವಣಾ ಪ್ರಚಾರ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಟೀ ಮಾರುವ ಬಾಲ್ಯದ ದಿನಗಳನ್ನು ಮತ್ತೆ ನೆನಪಿಸಿದ್ದಾರೆ. ಈ ಬಾರಿ ಅವರು ಅದಕ್ಕೆ " ಅಸ್ಸಾಂ ತಿರುವು"  ನೀಡಿದ್ದಾರೆ. " ನಾನು ಮಾರುತಿದ್ದದ್ದು ಅಸ್ಸಾಂ ಟೀ. ಹಾಗಾಗಿ ನನಗೆ ಹೊಟ್ಟೆಪಾಡಿಗೆ ನೆರವಾದ ಅಸ್ಸಾಂ ನ ಋಣ ನನ್ನ ಮೇಲಿದೆ. ಅಸ್ಸಾಂ ಟೀ ಎಲ್ಲರಿಗೂ ಶಕ್ತಿ ನೀಡುತ್ತದೆ. ಆದರೆ ಆ ಟೀ ಬೆಳೆಯುವವರಿಗೆ ಅದು ಶಕ್ತಿ ನೀಡುತ್ತಿಲ್ಲ. ಅವರ ಮುಖದಲ್ಲಿ ನಾವು ನಗು ತರಬೇಕಿದೆ " ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಈ ಹೇಳಿಕೆಗೆ  ಸಾಮಾಜಿಕ ಜಾಲತಾಣದಲ್ಲಿ ಜನರ ಟೀಕೆಗೆ, ವ್ಯಂಗ್ಯಕ್ಕೆ ಆಹಾರ ಒದಗಿಸಿದೆ. ಮತ ಸೆಳೆಯುವ ಉದ್ದೇಶ ಮಾತ್ರ ಇದರ ಹಿಂದಿದೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬಂದಿದೆ. ಈ ವ್ಯಂಗ್ಯೋಕ್ತಿಗಳ ಕೆಲವು ಸ್ಯಾಂಪಲ್ ಗಳು ಇಲ್ಲಿವೆ ನೋಡಿ : 

ನಾನು ಟೀ ಮಾರುತ್ತಿದ್ದಾಗ ನನ್ನ ಚಮಚ ಸೇಲಂ ನಿಂದ ಬರುತ್ತಿತ್ತು, ಗ್ರಾಹಕರು ಉತ್ತರ ಪ್ರದೇಶದವರಾಗಿದ್ದರು,ಹಳೆಯ ಟಿನ್ ಗಳು ಬಂಗಾಳದಿಂದ ಬರುತ್ತಿದ್ದವು - ಹಾಗಾಗಿ ನನ್ನ ಮೇಲೆ ಎಲ್ಲ ಚುನಾವಣೆ ನಡೆಯುವ ರಾಜ್ಯಗಳ ಋಣವಿದೆ. 

- ಸಬೀರ್ ಶುಕ್ಲ 

ನಾನು ಆರೆಸ್ಸಸ್ ಪ್ರಚಾರಕನಾಗಿದ್ದಾಗ ಆರೆಸ್ಸೆಸ್ ಸಮವಸ್ತ್ರವನ್ನೇ ಹೆಚ್ಚಾಗಿ ಹಾಕಿಕೊಳ್ಳುತ್ತಿದ್ದೆ. ಅದಕ್ಕಾಗಿ ನಾನು ಮುಸೊಲೊನಿಯ ಇಟಲಿಗೆ ನಾನು ಋಣಿಯಾಗಿದ್ದೇನೆ. 

- ಅಮಿತ್ ವರ್ಮ 

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶಾಂಘೈ ಯಾ ಚಿತ್ರಗಳನ್ನು ಫೋಟೋಶಾಪ್ ಮಾಡಿ ಅಹ್ಮದಾಬಾದ್ ಚಿತ್ರ ಎಂದು ನಂಬಿಸಿದ್ದೆ . ಅದಕ್ಕಾಗಿ ನನ್ನ ಮೇಲೆ ಚೀನಾದ ಋಣ ಇದೆ. 

- ಸುಮಿತ್ ರಾಯ್  

ನಾನು ಅಸ್ಸಾಂ ಟೀ ಮಾರಿದ್ದು ಎಂದು ಹೇಳುವ ಮೋದಿ ಇಂಗ್ಲಂಡ್ ನಲ್ಲಿ ರಾಣಿಗೆ ಡಾರ್ಜಿಲಿಂಗ್ ಟೀ ಉಡುಗೊರೆ ಕೊಟ್ಟಿದ್ದರು. ಇದನ್ನು ಅಸ್ಸಾಂ ಕ್ಷಮಿಸುವುದೇ ?

- ಚೇತನ್ ಭಗತ್ 

ಟೀ ಬೀಜಗಳನ್ನು ಬಿತ್ತಲು ಗುದ್ದಲಿ ಹಿಡಿದು ಅಗೆಯುತ್ತಿರುವ ಬಾಲಕ ಮೋದಿಯ ಚಿತ್ರ !

- ರಿಯಲ್ ಹಿಸ್ಟರಿ ಪಿಕ್ 

ಬಾಲಕ ಮೋದಿ ಅಸ್ಸಾಂ ನಲ್ಲಿ ಟೀ ಎಲೆಗಳನ್ನು ಕೀಳುತ್ತಿರುವ ಚಿತ್ರ !

- ರಿಯಲ್ ಹಿಸ್ಟರಿ ಪಿಕ್ 

ಮೋದಿ ಮಾರಿದ ಟೀ ಬ್ರ್ಯಾಂಡ್ ಗಳ ಪಟ್ಟಿ ಯಾರ ಬಳಿ ಇದೆ ?

-ಶಾನ್ 

ಇಂದು ಅಸ್ಸಾಂ ನಲ್ಲಿ ಪ್ರಚಾರ ಇರುವುದರಿಂದ ಅಸ್ಸಾಂ ಟೀ. ನಾಳೆ ಮೋದಿ ಡಾರ್ಜಿಲಿಂಗ್ ಗೆ ಪ್ರಚಾರಕ್ಕೆ ಹೋದರೆ ಡಾರ್ಜಿಲಿಂಗ್ ಟೀ ! 

- ಆಗನ್ 86

ನಾನು ಗಾಳಿಯಿಂದ ಟೀ ಮಾಡುವ ಸಾಮರ್ಥ್ಯ ಹೊಂದಿದ್ದೆ ಎಂದು ಹೇಳಲು ಮೋದಿ ಮರೆತಿದ್ದಾರೆ. 

- ಮೊಹಮ್ಮದ್ ಉಬೈದುಲ್ಲಾ 

ಚಾಇವಾಲ ಟ್ರಿಕ್ ಒಳ್ಳೇದೆ. ಆದರೆ ಈ  ಅಸ್ಸಾಂ ಟೀ ಸ್ವಲ್ಪ ಅತಿಯಾಯಿತು. 

ಈಗ ಮೋದಿ ತಮ್ಮ ಟೀ ಕತೆಯನ್ನು ಮಾರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ನಂತರ ಅಸ್ಸಾಮನ್ನು ಕಾರ್ಪೋರೆಟ್ ಗಳಿಗೆ ಹಾಗು ತನ್ನ ಸಿದ್ಧಾಂತ ಬಳಗದವರಿಗೆ ಮಾರುತ್ತಾರೆ. 

- ಕೆ ಬಿ ಬೈಜು 

ನರೇಂದ್ರ ಮೋದಿ ಇನ್ನೂ ಟೀ ಮಾರುತ್ತಿದ್ದಿದ್ದರೆ ಆ ಎಂ ಟಿ ಆರ್ ನ ಅಜ್ಜನನ್ನೂ ಪ್ರಚಾರದಲ್ಲಿ ಹಿಂದಿಕ್ಕಿ ಬಿಡುತ್ತಿದ್ದರು. 

- ಅಮರ್ ರಜಪೂತ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News