ರೈತನ ಹೆಣದ ಮೇಲೆ “ಕಾರ್ಪೋರೇಟ್”ಗಳಿಗೆ ಗುತ್ತಿಗೆಯ ಹರಿವಾಣ ಇದು ಅಂಬೇಡ್ಕರ್ ಜಯಂತಿಗೆ ಕೊಡುಗೆ…

Update: 2016-04-14 05:14 GMT

ಅಂಬೇಡ್ಕರ್ ಜಯಂತಿ ದಿನ ನಾಡಿನ ರೈತ-ತಳ ಸಮುದಾಯಗಳಿಗೆ ಕೇಂದ್ರ ಸರಕಾರ ಮುಟ್ಟಿ ನೋಡಿಕೊಳ್ಳುವಂತಹ ಏಟು ನೀಡಿದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಹೆಸರಿನಲ್ಲಿ ಕಾರ್ಪೋರೇಟ್ ಸಮುದಾಯಕ್ಕೆ ಭೂಮಿಯನ್ನು ತಟ್ಟೆಯಲ್ಲಿಟ್ಟು ಕೊಡುವ ಹುನ್ನಾರದಂತೆ ಇದು ಕಾಣಿಸುತ್ತಿದೆ.
ಟಿ. ಹಕ್ ನೇತ್ರತ್ವದ ಸಮಿತಿ ನೀತಿ ಆಯೋಗದ ಮೂಲಕ ನೀಡಿರುವ ಈ ಕರಡು ಮಸೂದೆ ವಿರೋಧಿಸದಿದ್ದರೆ ರೈತರಿಗೆ ಉಳಿಗಾಲ ಇಲ್ಲ. ಭೂರಹಿತ ರೈತರಿಗೆ ಸಾಲ, ವಿಮೆ, ಪರಿಹಾರ ಒದಗಿಸುವ ಹೆಸರಲ್ಲಿ ಕಾರ್ಪೋರೇಟ್ ಗಳ ಹೊಟ್ಟೆ ತುಂಬಿಸುವ ದುಷ್ಟ ಯೋಚನೆ ಇದು. ರೈತಪರ ಎಂದು ಹೇಳಿಕೊಳ್ಳುವ ನಾಡಿನ ಎಲ್ಲ ಸಂಘಟನೆಗಳಿಗೆ ರೈತರ ಮೇಲೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಉಳಿವಿಗಾಗಿ ಹೋರಾಟ ಆರಂಭ ಆಗುವುದು ಅನಿವಾರ್ಯ ಆಗಲಿದೆ.
ಕಾಂಗ್ರೆಸ್ ಆಡಳಿತ ಕಾಲದಲ್ಲಿ “ ರಿಲಯನ್ಸ್ ಫ್ರೆಷ್” ಎಂಬ ವಿಫಲ ಯತ್ನವೊಂದು ನಡೆದದ್ದು ನೆನಪಿದೆಯೇ? ಅವರದ್ದೇ ಕ್ರಷಿಭೂಮಿ, ಅವರದ್ದೇ ಬೆಳೆ, ಅವರದ್ದೇ ಸಾಗಾಟ, ಅವರದ್ದೇ ಉಗ್ರಾಣ, ಅವರದ್ದೇ ಮಾರಾಟ – ಇಂತಹದೊಂದು ಏಕಸ್ವಾಮ್ಯಕ್ಕೆ ಸಾರ್ವಜನಿಕ ವಿರೋಧ ಬಂದು, ಈ ಯೋಜನೆ ವಿಫಲಗೊಂಡಿತ್ತು. ಆಗ ಊರೂರಲ್ಲಿ ಏಜಂಟರನ್ನು ಬಿಟ್ಟು ಭೂಮಿ ಖರೀದಿಗೆ ಹೊರಟಿದ್ದ ರಿಲಯನ್ಸ್ ಈ ಕಾನೂನಿನಡಿ ನೇರಾನೇರ ಭೂಮಿ ಗುತ್ತಿಗೆಗೆ ಪಡೆಯಬಹುದಾಗಿದೆ.
ಈ ದೇಶದ ಅತಿದೊಡ್ಡ ಕ್ರಷಿ ಆಮದುಗಾರರು ಯಾರು ಗೊತ್ತೇ? ಇದೇ ಅಂಬಾನಿ, ಅದಾನಿ ಅಂಡ್ ಕೋ. ಸಹಜವಾಗಿಯೇ ಈ ಮಂದಿಗೆ ಸರ್ಕಾರದ ಈ ಮಿತಿರಹಿತ ಭೂಗುತ್ತಿಗೆ ಕಾನೂನು ಅಮಿತಾನಂದ ತರಲಿದೆ. ಅದಕ್ಕೆ ಸರಿಯಾಗಿ ಕರಡು ಕಾಯಿದೆ "ಕ್ರಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ" ಎಂದು ಹೇಳುತ್ತಿದೆ. ಆ ವಿವರಣೆ ಕಣ್ಣಿದ್ದವರಿಗೆ ಅದೇನೆಂದು ಹೇಳುತ್ತದೆ: “Agriculture and Allied Activities ” shall mean raising of crops including food and non food crops, fodder or grass; fruits and vegetables, flowers, any other horticultural crops and plantation; animal husbandry and dairy; poultry farming, stock breeding; fishery; agro forestry, agro-processing and other related activities by farmers and farmer groups.


ಕರ್ನಾಟಕದಲ್ಲಿ ಉಳುವವನೇ ಹೊಲದೊಡೆಯ ಎಂದು ಭೂಸುಧಾರಣಾ ಮಸೂದೆಗೆ ಒಪ್ಪಿಗೆ ಕೊಟ್ಟವರು ನಾವು. ಈಗ ದನ್ನು ಮತ್ತೆ ಬಲಾಡ್ಯರ ಕೈಗೆ ಗುತ್ತಿಗೆಯಾಗಿ ಹಿಂದೆಕೊಡುವ ಕಾನೂನು ಇದು. ತಮಾಷೆ ಎಂದರೆ, ಈ ಭೂಮಸೂದೆಯ ವಿರೋಧ ಮಾಡಿದ ಮೇಲುವರ್ಗಗಳು ಹಾಗೂ ಭೂಮಸೂದೆಯ ಕಾರಣದಿಂದಾಗಿ ಶಿಕ್ಷಣ-ಆರ್ಥಿಕ ಬಲ, ಸಾಮಾಜಿಕ ಸ್ಥಾನಮಾನ ಪಡೆದಿರುವ ಕೆಳಜಾತಿಗಳು ಒಟ್ಟು ಸೇರಿ ಈಗ “ನವಬಲಾಡ್ಯ”ಕಾರ್ಪೋರೇಟ್ ಗಳ ಕೈಗೆ ಕೋಲು ಕೊಟ್ಟು ಪೆಟ್ಟು ತಿನ್ನಲು ಹೊರಟಿರುವುದು.
ಆಸಕ್ತಿ ಇರುವವರಿಗೆ ಈ ಕರಡು ಕಾಯಿದೆ ಓದಲು ಲಿಂಕ್ ಇಲ್ಲಿದೆ: http://niti.gov.in/mgov_file/Final_Report_Expert_Group_on_Land_Leasing.pdf

Writer - ರಾಜಾರಾಂ ತಲ್ಲೂರ್

contributor

Editor - ರಾಜಾರಾಂ ತಲ್ಲೂರ್

contributor

Similar News