ಲೇಖನ ಸ್ಪರ್ಧೆ ಮತ್ತು ಕಥಾ ಸ್ಪರ್ಧೆಗೆ ಆಹ್ವಾನ

Update: 2016-05-11 19:02 GMT

ಮಾನ್ಯರೆ,

‘ಕನ್ನಡ ಪುಸ್ತಕ ಮನೆ’ ಸಾಹಿತ್ಯ ವೇದಿಕೆಯ ಉದ್ಘಾಟನೆ ಸಂದರ್ಭದಲ್ಲಿ, ಲೇಖನ ಸ್ಪರ್ಧೆ, ಕಾರ್ಡಿನಲ್ಲಿ ಕಥಾ ಸ್ಪರ್ಧೆ ಏರ್ಪಡಿಸಲಾಗಿದೆ, ಲೇಖನ ಸ್ಪರ್ಧೆಯ ವಿಷಯ ‘‘ಜಲ ಸಂರಕ್ಷಣೆಗೆ ಸಾರ್ವಜನಿಕರ ಪಾತ್ರವೇನು? ‘‘ಅಥವಾ ‘‘ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಪಾತ್ರವೇನು?’’ ವಿಷಯಕ್ಕೆ ಸಂಬಂಧಪಟ್ಟಂತೆ ಪುಲ್ ಸ್ಕೇಪ್ ಹಾಳೆಯಲ್ಲಿ 4 ಪುಟಗಳು ಮೀರದಂತೆ ಲೇಖಕರು ಬರೆದು ಕಳುಹಿಸಬೇಕು. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನದ ಜೊತೆಗೆ 10 ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಕಾರ್ಡಿನಲ್ಲಿ ಕಥಾ ಸ್ಪರ್ಧೆಗೆ ಕಳುಹಿಸುವವರು ಕಡ್ಡಾಯವಾಗಿ ಕಾರ್ಡಿನಲ್ಲೇ ಕಥೆಯನ್ನು ಬರೆಯಬೇಕು ಜೊತೆಗೆ ಸ್ಪಷ್ಟವಾದ ವಿಳಾಸವನ್ನು ಮತ್ತು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಎರಡು ವಿಷಯಗಳಿಗೂ ಕಳುಹಿಸಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನದ ಜೊತೆಗೆ 10 ಸಮಾಧಾನಕರ ಬಹುಮಾನ ನೀಡಲಾಗುತ್ತದೆ,ಬರಹಗಾರು ಲೇಖನ ಅಥವಾ ಕಥೆಯನ್ನು ದಿನಾಂಕ 20.05.2016ರ ಒಳಗೆ ಕೆಳಗಿನ ವಿಳಾಸಕ್ಕೆ ಕಳುಹಿಸತಕ್ಕದ್ದು.
                                                                            ವಿಳಾಸ: ಪುರುಷೋತ್ತಮ.ಎನ್
                                                                                      ಸಂಸ್ಥಾಪಕರು
                                                                                  ಕನ್ನಡ ಪುಸ್ತಕ ಮನೆ
                                                                       ನಂ:729,ಅನುರಾಗ, 9ನೆ ಮುಖ್ಯ ರಸ್ತೆ,
                                                                                  3ನೆ ವಿಭಾಗ, 3ನೆ ಹಂತ,
                                                                    ಬಸವೇಶ್ವರನಗರ, ಬೆಂಗಳೂರು-560079.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News